ಕವರ್ ಸ್ಟೋರಿ

ಲಾಕ್ ಡೌನ್ ವೇಳೆ ನಿರ್ಮಾಣವಾಯ್ತು 3ಡಿ ರಾಮಮಂದಿರ, ಪಾಣೆಮಂಗಳೂರಿನ ವಿಜೇತ್ ನಾಯಕ್ ಕೈಚಳಕವಿದು

1 / 8

www.bantwalnews.com Editor: Harish Mambady

ಲಾಕ್ ಡೌನ್ ವೇಳೆ ಸಮಯದ ಸದುಪಯೋಗಪಡಿಸಿಕೊಂಡ ಪಾಣೆಮಂಗಳೂರಿನ ವಿಜೇತ್ ನಾಯಕ್  ಅಗರಬತ್ತಿ, ರಟ್ಟಿನಬಾಕ್ಸ್ ಇಟ್ಟುಕೊಂಡೇ ರಾಮಮಂದಿರ ನಿರ್ಮಿಸಿದ್ದಾರೆ. ಇದೀಗ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಈ ಕುರಿತು ಪತ್ರವನ್ನು ಬರೆದಿರುವ ಅವರು ಪ್ರಧಾನಿಯವರಿಗೆ ರಾಮಮಂದಿರದ ಈ ಪ್ರತಿಕೃತಿಯನ್ನು ಒಪ್ಪಿಸಲು ಇಚ್ಛಿಸಿದ್ದಾರೆ. ಸದ್ಯ ಪಡುಬಿದ್ರಿಯಲ್ಲಿ ಉದ್ಯೋಗದಲ್ಲಿರುವ ಮೇಲ್ಕಾರ್ ಸಮೀಪ ಪಾಣೆಮಂಗಳೂರು ನಿವಾಸಿ ವಿಜೇತ್, ಈ ರಾಮಮಂದಿರಕ್ಕೆ ಸುಮಾರು 2 ಕೆಜಿಯಷ್ಟು ಬಣ್ಣಬಣ್ಣದ ಊದುಬತ್ತಿ ಕಡ್ಡಿಗಳು, ಸ್ವಲ್ಪ ರಟ್ಟಿನ ಬಾಕ್ಸ್ ಹಾಗೂ ಗಟ್ಟಿಯಾಗಿ ನಿಲ್ಲಲು ಪ್ಲೈವುಡ್ ಉಪಯೋಗಿಸಿದ್ದಾರೆ. ಇವುಗಳನ್ನು ಅಂಟಿಸಲು ಫೆವಿಕಾಲ್ ಗಮ್ ಜೊತೆಗೆ ಅಲಂಕಾರಿಕವಾಗಿ ಸಣ್ಣ  ಬಲ್ಬ್ ಗಳನ್ನು ಇಟ್ಟಿರುವ ಅವರು ಇಡೀ ರಾಮಮಂದಿರದ ಪ್ರತಿಕೃತಿಗೆ ವಾರ್ನಿಶ್ ನಿಂದ ಹೊಳಪು ನೀಡಿದ್ದಾರೆ. ಇದು ಕೆಡದಂತೆ ಗಾಜಿನ ಹೊದಿಕೆಯನ್ನು ಹಾಕಲಾಗಿದ್ದು, ಲೈಟ್ ಹಾಕಿದರೆ, ತ್ರಿಡಿ ಯ ಪ್ರತಿಕೃತಿಯಂತೆಯೇ ಕಾಣಿಸುತ್ತದೆ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ