ಕವರ್ ಸ್ಟೋರಿ

ಅದೋ ನೋಡಿ, ಮತ್ತೆ ಅದೇ ಜಾಗದಲ್ಲಿ ಬಿ.ಸಿ.ROAD ನಲ್ಲಿ ದೊಡ್ಡ ದೊಡ್ಡ ಹೊಂಡ!!

ಜಾಹೀರಾತು

ಜನರು ಬದಲಾಗಬಹುದು, ವಾಹನ ಬದಲಾಗಬಹುದು, ಕಚೇರಿಗಳಲ್ಲಿ ಕುಳಿತುಕೊಳ್ಳುವವರು ಬದಲಾಗಬಹುದು, ಜನಸೇವಕರು ಬದಲಾಗಬಹುದು, ಪ್ರಯಾಣಿಕರು ಬದಲಾಗಬಹುದು, ಊರಿಗೆ ಊರೇ ಬದಲಾಗಬಹುದು ಆದರೆ..,

ಬಿ.ಸಿ.ರೋಡಿನಲ್ಲಿ ಹೊಂಡಗಳು ಮಾತ್ರ ಅದೇ ಜಾಗದಲ್ಲಿ ಪ್ರತಿ ಮಳೆಗಾಲದಲ್ಲಿ ಪ್ರತ್ಯಕ್ಷಗೊಳ್ಳುತ್ತವೆ.

ಜಾಹೀರಾತು

ಒಂಥರಾ TOM and JERRY ಆಟದಂತೆ ಹೊಂಡಗಳನ್ನು ಮುಚ್ಚುವುದು, ಮತ್ತೆ ಕಿತ್ತು ಹೋಗುವುದು ನಡೆಯುತ್ತಲೇ ಇರುತ್ತವೆ. ಯಾರಾದರೂ ಬೈಕಿನಲ್ಲಿ ಹೋಗುವವರು ಗೊತ್ತಿಲ್ಲದೆ ಧಡ್ ಎಂದು ಹೊಂಡಕ್ಕೆ ಚಕ್ರ ಹಾಕಿ ಮತ್ತೆ ಮನೆಯಲ್ಲಿ ರಿಪೇರಿ ಖರ್ಚು ಎಷ್ಟಾಗಬಹುದು ಎಂದು ಕಿಸೆ ನೋಡಿಕೊಂಡರೆ, ಕಾರಿನಂಥ ವಾಹನಗಳನ್ನು ನೇರ ಸರ್ವೀಸ್ ಗೆ ಇಡಬೇಕು. ಲಾರಿ, ಬಸ್ಸುಗಳು ಉಸ್ಸಪ್ಪಾ ಎಂದು ಹತ್ತಿ ಇಳಿದು ಹೋಗುವ ದುರ್ದೈವಿ ವಾಹನಗಳು. ಇದು ಬಿ.ಸಿ.ರೋಡ್ ನಲ್ಲಿ ಹಾದು ಹೋಗುವ ಹೆದ್ದಾರಿ ಹೊಂಡ. ಇದಕ್ಕೆ ಪ್ರತ್ಯೇಕ ವರ್ಣನೆ ಇನ್ನು ಬೇಕಿಲ್ಲ ಅನಿಸುತ್ತದೆ.

ಜಾಹೀರಾತು

ಪ್ರತಿ ವರ್ಷವೂ ಬಿ.ಸಿ.ರೋಡ್ ನ ಹಳೇ ಎಲ್ಲೈಸಿ ಕಚೇರಿಯಿಂದ ಬಸ್ ನಿಲ್ದಾಣದವರೆಗೆ, ಪಾಣೆಮಂಗಳೂರು ಕಲ್ಲುರ್ಟಿ ಸನ್ನಿಧಿಯ ಪಕ್ಕ, ಮೇಲ್ಕಾರಿನ ಟ್ರಾಫಿಕ್ ಪೊಲೀಸ್ ಠಾಣೆಯ ಪಕ್ಕ, ದಾಸಕೋಡಿ ಹೀಗೆ ಹೊಂಡಗಳು ಹಳೇ ಬಾಕಿಯನ್ನು ಸಾಲಗಾರನಿಂದ ಕೇಳುವಂತೆ ನೆನಪು ಮಾಡುತ್ತಲೇ ಇರುತ್ತದೆ. ಹೆದ್ದಾರಿಯ ಹೊಂಡಗಳು ಆರೋಪ, ಪ್ರತ್ಯಾರೋಪ, ಅಣಕವಾಡಲು, ಕೆಣಕಲು ರಾಜಕೀಯದವರಿಗೆ ವಸ್ತುವಾಗಿದ್ದರೆ, ಜನಸಾಮಾನ್ಯನಾದರೋ ಯಾರಾದರೂ ಆದೀತು, ಮೊದಲು ಇದಕ್ಕೊಂದು ಶಾಶ್ವತ ಪರಿಹಾರವನ್ನು ಒದಗಿಸಿಬಿಡಿ ಎಂದು ಕೇಳುವುದಷ್ಟೇ ಮಾಡಬೇಕಾದ ಪರಿಸ್ಥಿತಿ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.