ಬಂಟ್ವಾಳ

ಬಂಟ್ವಾಳ ತಾಲೂಕಿನಲ್ಲಿ ಕೃಷಿ, ತೋಟಗಾರಿಕೆಯ 26.93 ಹೆಕ್ಟೇರ್ ಭೂಮಿಗೆ ಹಾನಿ

ಜಾಹೀರಾತು

ಶುಕ್ರವಾರ ರಾತ್ರಿಯಿಂದೀಚೆಗೆ ಸುರಿದ ಭಾರಿ ಮಳೆಗೆ ಬಂಟ್ವಾಳ ತಾಲೂಕಿನ ಒಟ್ಟು 6.73 ಹೆಕ್ಟೇರ್ ತೋಟಗಾರಿಕೆ ಹಾಗೂ 20.2 ಹೆಕ್ಟೇರ್ ಕೃಷಿ ಭೂಮಿಗೆ ಹಾನಿಯಾಗಿದೆ. 2 ಅಂಗನವಾಡಿಗಳ ಆವರಣಗೋಡೆ ಕುಸಿದ ಪ್ರಕರಣಗಳಿದ್ದರೆ, 2 ಮನೆಗಳು ಭಾಗಶಃ ಹಾನಿಯಾಗಿದೆ ಎಂದು ಕಂದಾಯ ಇಲಾಖೆ ಮಾಹಿತಿ ತಿಳಿಸಿದೆ.

ಅಜ್ಜಿಬೆಟ್ಟು ಗ್ರಾಮದ ದಂಬೆಮಾರ್ ಎಂಬಲ್ಲಿ ಜಯ ಶೆಟ್ಟಿ, ಮಹಾಬಲ ಶೆಟ್ಟಿ, ಬೂಬ ಶೆಟ್ಟಿ ಅವರ 1.2 ಹೆಕ್ಟೇರ್ ಅಡಿಕೆ ತೋಟದಲ್ಲಿ ನೀರು ನಿಂತಿದೆ. ಕಾವಳಮುಡೂರು ಗ್ರಾಮದ ಶ್ರೀನಿವಾಸ ನಾಯಕ್ ಅಡಿಕೆ ತೋಟಕ್ಕೆ ನೀರುನುಗ್ಗಿ 0.25 ಹೆಕ್ಟೇರ್ ಭಾಗದಲ್ಲಿ ನಿಂತಿದೆ. ಕಳ್ಳಿಗೆ ಗ್ರಾಮದ ಲೀಲಾ ಅವರ ಅಡಿಕೆ ತೋಟಕ್ಕೆ 0.25 ಹೆಕ್ಟೇರ್ ಭಾಗದಲ್ಲಿ ನೀರು ನುಗ್ಗಿದೆ. ವಿಟ್ಲ ಕಸ್ಬಾ ಗ್ರಾಮದ ಹಾಜಿರಮ್ಮ ಮನೆಗೆ ಭಾಗಶಃ ಹಾನಿ, ಕುಕ್ಕಿಪ್ಪಾಡಿ ಗ್ರಾಮದ ಪ್ರಕಾಶ್ ಅವರ ಅಡಿಕೆ ತೋಟಕ್ಕೆ ಬರೆ ಜರಿದು 0.1 ಹೆಕ್ಟೇರ್ ತೋಟಕ್ಕೆ ಹಾನಿ, ಕುಡಂಬೆಟ್ಟು ಗ್ರಾಮದ ಹರ್ಕಾಡಿ ಎಂಬಲ್ಲಿ ತೋಡಿನ ಬದಿ ಜರಿದು ಸುಮಾರು 13 ಹೆಕ್ಟೇರ್ ಗದ್ದೆ ನೀರು ನಿಂತು ಹಾನಿ, ನರಿಕೊಂಬು ಗ್ರಾಮದಲ್ಲಿ ನೇತ್ರಾವತಿ ನದಿ ನೀರಿನಿಂದ ಸುಮಾರು 5 ಹೆಕ್ಟೇರ್ ತೋಟಕ್ಕೆ ನೀರು, ಕುರಿಯಾಳ ಬೂಬ ಮೂಲ್ಯ ಅವರ ಕಚ್ಚಾ ಮನೆ ಭಾಗಶಃ ಹಾನಿ, ಎಲಿಯನಡುಗೋಡು ಗ್ರಾಮದ ಪ್ರವೀಣ್ ಪೂಜಾರಿ ಅವರ 0.1 ಹೆ. ಭತ್ತದ ಗದ್ದೆಗೆ ನೀರು, ಕಾಡಬೆಟ್ಟು ಗ್ರಾಮದ ಸತೀಶ್ ಸಪಲ್ಯ ತೋಟಕ್ಕೆ ನೀರು ನುಗ್ಗಿ 0.1 ಹೆಕ್ಟೇರ್ ತೋಟದಲ್ಲಿ ನೀರು ನಿಂತಿದೆ. ಕುಡಂಬೆಟ್ಟು ತಿಮ್ಮೊಟ್ಟುಬೈಲು ಎಂಬಲ್ಲಿ ತೋಡಿನ ಬದಿ ಜರಿದು 7 ಹೆಕ್ಟೇರ್ ಭತ್ತದ ಗದ್ದೆಗೆ ನೀರು, ಮಾಣಿ ಗ್ರಾಮದ ಅಣ್ಣು ಮೂಲ್ಯ ದನದ ಕೊಟ್ಟಿಗೆಗೆ ಹಾನಿ, ಬಾಳ್ತಿಲ ಕಶೆಕೋಡಿ ಗ್ರಾಮದ ಹಾಗೂ ಕುಕ್ಕಿಪ್ಪಾಡಿ ಸಿದ್ಧಕಟ್ಟೆ ಅಂಗನವಾಡಿ ಕೇಂದ್ರದ ಆವರಣಗೋಡೆ ಕುಸಿದಿದೆ. ಕಾವಳಮುಡೂರು ಯಶೋಧರ ಅಂಚನ್ ಗದ್ದೆ ಬದಿ ಜರಿದು 0.1 ಹೆಕ್ಟೇರ್ ತೋಟಕ್ಕೆ ಹಾನಿ, ನೆಟ್ಲಮುಡ್ನೂರು ಗ್ರಾಮದ ಸುರೇಶ್ ರೈ ದನದ ಹಟ್ಟಿಗೆ ಹಾನಿಯಾಗಿದೆ. ಬರಿಮಾರು ಗ್ರಾಮದ ನೇತ್ರಾವತಿ ನದಿ ನೀರಿನಿಂದ 7 ಜನರ ಅಂದಾಜು 2 ಹೆಕ್ಟೇರ್ ತೋಟಕ್ಕೆ ನೀರು ನುಗ್ಗಿದೆ. ಎಲಿಯನಡುಗೋಡು ಶಿವರಾಮ ಶೆಟ್ಟಿ ಅವರ ಬತ್ತದ ಗದ್ದೆಗೆ ನೀರು ನುಗ್ಗಿ 0.1 ಹೆಕ್ಟೇರ್ ಗದ್ದೆ ಹಾನಿ, ಬಾಳ್ತಿಲ ಗ್ರಾಮ ಲವೀನ ಸೀಕ್ವೇರ ಅವರ 0.1 ಹೆ.ಅಡಿಕೆ ತೋಟಕ್ಕೆ ಹಾನಿಯಾಗಿದೆ ಎಂದು ಇಲಾಖಾ ಮಾಹಿತಿ ತಿಳಿಸಿದೆ.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.