ಬಂಟ್ವಾಳ

ಗ್ರಾಹಕರಿಗೆ ಸಿಹಿಸುದ್ದಿ: ಹೋಟೆಲ್ ಸಿಲ್ವರ್ ನಾಳೆಯಿಂದ ಓಪನ್

ಜಾಹೀರಾತು

ಬಿ.ಸಿ.ರೋಡಿನ ಕೈಕುಂಜೆಯಲ್ಲಿರುವ ಮೆಸ್ಕಾಂ ಕಚೇರಿಯ ಸನಿಹವೇ ಇರುವ ಸಾಧನಾ ರೆಸಿಡೆನ್ಸಿ ಸಂಕೀರ್ಣದಲ್ಲಿರುವ ಹೋಟೆಲ್ ಸಿಲ್ವರ್ ಸೀಫುಡ್ ಫ್ಯಾಮಿಲಿ ರೆಸ್ಟೊರೆಂಟ್ ಸೋಮವಾರದಿಂದ ಎಂದಿನಂತೆ ಗ್ರಾಹಕರ ಸೇವೆಗೆ ಲಭ್ಯ.

 

 

ಜಾಹೀರಾತು

ಲಾಕ್ ಡೌನ್ ನಿಂದ ಎರಡೂವರೆ ತಿಂಗಳು ಸರ್ಕಾರದ ಸೂಚನೆಯನ್ವಯ ಬಂದ್ ಆಗಿದ್ದ ರೆಸ್ಟೋರೆಂಟ್ ನಾಳೆಯಿಂದ ಸರ್ಕಾರದ ಸಕಲ ನಿಯಮಗಳನ್ನು ಅನುಸರಿಸಿ, ಶುಚಿ ರುಚಿಯಾದ ಖಾದ್ಯಗಳನ್ನು ಒದಗಿಸಲು ಸಿದ್ಧವಾಗಿದೆ ಎಂದು ಮಾಲೀಕ ವಿಶ್ವನಾಥ ಸಾಲ್ಯಾನ್ ಬಂಟ್ವಾಳ ಮಾಹಿತಿ ನೀಡಿದ್ದಾರೆ.

ಹೋಟೆಲ್ ಸಿಲ್ವರ್. ಸೀಫುಡ್.. ಫ್ಯಾಮಿಲಿ ರೆಸ್ಟೊರೆಂಟ್, ಕೈಕುಂಜೆ ರಸ್ತೆ, ಬಿ.ಸಿ.ರೋಡ್

2017 ಸೆಪ್ಟೆಂಬರ್ ನಲ್ಲಿ ಆರಂಭಗೊಂಡಿದ್ದ ಸಿಲ್ವರ್ ರೆಸ್ಟೋರೆಂಟ್ ಬಹುಬೇಗನೆ ಜನಮನ್ನಣೆ ಗಳಿಸಿತು. ಇಲ್ಲಿನ ಪಾರ್ಸೆಲ್ ವ್ಯವಸ್ಥೆ ಜನರಿಗೆ ಅನುಕೂಲವಾಗಿದ್ದರೆ, ಕುಟುಂಬ ಸಮೇತ ಬಂದು ಆಹಾರ ಸೇವಿಸಿ ತೆರಳಲು ಪಾರ್ಕಿಂಗ್ ಮೊದಲಾದ ವ್ಯವಸ್ಥೆಗಳು ಜನಮನ್ನಣೆ ಗಳಿಸಿತು. ಸರ್ಕಾರಿ ಕಚೇರಿಗಳಿಗೆ ಬರುವ ನಾನ್ ವೆಜ್ ಪ್ರಿಯರನ್ನು ಮಧ್ಯಾಹ್ನದ ಶುಚಿರುಚಿಯ ಭೋಜನಕ್ಕೆ ಕೈಕುಂಜ ರಸ್ತೆಯೆಡೆ ಹೆಜ್ಜೆ ಹಾಕುವಂತೆ ಸಿಲ್ವರ್ ಮಾಡಿದೆ.

ಕರಾವಳಿ ಮೀನಿನ ಖಾದ್ಯಕ್ಕೆ ವಿಶೇಷತೆ ಹೊಂದಿರುವ ರೆಸ್ಟೋರೆಂಟ್ ಅತ್ಯುತ್ತಮ ಗುಣಮಟ್ಟದ ಫುಡ್ ಐಟಂಗಳನ್ನು ಅತ್ಯಂತ ಕಡಿಮೆ ದರದಲ್ಲಿ ನೀಡುತ್ತಿದೆ. ಗ್ರಾಹಕರ ಅನುಕೂಲಕ್ಕಾಗಿ ವಿಶಾಲ ಪಾರ್ಕಿಂಗ್ ವ್ಯವಸ್ಥೆ, ಫ್ಯಾಮಿಲಿ-ಮಹಿಳೆಯರಿಗೆ ಪ್ರತ್ಯೇಕ ಕ್ಯಾಬಿನ್, ಟೇಸ್ಟಿಂಗ್ ಹಾಗೂ ಸೋಡಾ ಪುಡಿ ರಹಿತ ತಾಜಾ ಫುಡ್ ಇಲ್ಲಿನ ವೈಶಿಷ್ಟ್ಯ. 2017ರ ಸೆಪ್ಟೆಂಬರ್ ನಿಂದ ಇದುವರೆಗೂ ಗ್ರಾಹಕರು ನೆಚ್ಚಿದ್ದ ಸಿಲ್ವರ್ ಹೋಟೆಲ್, ಲಾಕ್ ಡೌನ್ ನಿಂದಾಗಿ ತೆರೆಯದಿದ್ದಾಗ ಯಾವಾಗ ಓಪನ್ ಆಗುತ್ತದೆ ಎಂದು ನೂರಾರು ಗ್ರಾಹಕರು ದೂರವಾಣಿ ಕರೆ ಮಾಡಿ ಪ್ರಶ್ನಿಸುತ್ತಿದ್ದರು. ಇದು ಗ್ರಾಹಕರು ಹೋಟೆಲ್ ಮೇಲಿಟ್ಟಿರುವ ಪ್ರೀತಿ ವಿಶ್ವಾಸ ಎಂದು ಹೇಳುವ ವಿಶ್ವನಾಥ್ ಬಂಟ್ವಾಳ, ಇದೀಗ ಸಿಲ್ವರ್ ಹೋಟೆಲ್ ನ ಗ್ರಾಹಕರು, ಮಾಂಸಾಹಾರಿ ತಿನಿಸುಗಳನ್ನು ಇಷ್ಟಪಡುವವರು ಸೋಮವಾರದಿಂದ ಸಿಲ್ವರ್ ಹೋಟೆಲ್ ಗೆ ಆಗಮಿಸಿ, ಖಾದ್ಯವೈವಿಧ್ಯಗಳನ್ನು ಸವಿಯಬಹುದು, ಹಿಂದಿನಂತೆಯೇ ಅತ್ಯುತ್ಕೃಷ್ಟ ಸೇವೆ ನೀಡಲು ಹಾಗೂ ಗುಣಮಟ್ಟದೊಂದಿಗೆ ಯಾವುದೇ ರಾಜಿ ಮಾಡದೆ ಶುಚಿರುಚಿಯಾದ ತಿನಿಸುಗಳನ್ನು ಒದಗಿಸಲು ಬದ್ಧ ಎಂದು ಹೇಳಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ