ಬಂಟ್ವಾಳ

ಎಪಿಎಂಸಿ ನಿಯಮಾನುಸಾರ ಕೃಷಿಯುತ್ಪನ್ನ ಖರೀದಿಗೆ ಅವಕಾಶ: ಪದ್ಮನಾಭ ರೈ

ಎಪಿಎಂಸಿ ನಿಯಮಾನುಸಾರವಾಗಿ ಪ್ರತಿಯೊಬ್ಬ ರೈತರಿಗೂ ಅವರ ಉತ್ಪನ್ನಗಳ ತೂಕ, ಮೌಲ್ಯ ನಮೂದಿಸಿ ಖದೀರಿಸಲು ಅವಕಾಶವಿದೆ ಎಂದು ಬಂಟ್ವಾಳ ಎಪಿಎಂಸಿ ಅಧ್ಯಕ್ಷ ಕೆ.ಪದ್ಮನಾಭ ರೈ ಹೇಳಿದ್ದಾರೆ.

ಜಾಹೀರಾತು

ಬಂಟ್ವಾಳದಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಅಧ್ಯಕ್ಷ ಪದ್ಮನಾಭ ರೈ ಮತ್ತು ಉಪಾಧ್ಯಕ್ಷ ಚಂದ್ರಶೇಖರ ಪೂಜಾರಿ, ರೈತರಿಗೆ ಹಣಕಾಸಿನ ತೊಂದರೆಯಾಗದಂತೆ ತಮ್ಮ ಕೃಷಿ ಉತ್ಪನ್ನಗಳಾದ ಅಡಕೆ, ತೆಂಗಿನಕಾಯಿ, ಗೇರುಬೀಜ, ಕರಿಮೆಣಸು, ಕಾಡುತ್ಪತ್ತಿ ಹಾಗೂ ಇನ್ನಿತರ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಸರ್ಕಾರ ಅನುಮತಿಸಿದೆ. ಆದ್ದರಿಂದ ಬಂಟ್ವಾಳ ತಾಲೂಕಿನ ಎಪಿಎಂಸಿ ವತಿಯಿಂದ ಪರವಾನಗಿ ಪಡೆದ ವ್ಯಾಪಾರಿಗಳು ಸರ್ಕಾರದ ಕೋವಿಡ್ ಷರತ್ತುಗಳಿಗೆ ಒಳಪಟ್ಟು ಕನಿಷ್ಠ ಅಂತರ ಕಾಪಾಡಿಕೊಂಡು ಮುಖಗವಚಗಳನ್ನು ಧರಿಸಿ ಬೆಳಗ್ಗೆ 7ರಿಂದ ಮಧ್ಯಾಹ್ನ 11.30ರವರೆಗೆ ಈ ಕೃಷಿಯುತ್ಪನ್ನಗಳನ್ನು ಪ್ರತಿಯೊಬ್ಬ ರೈತರಿಗೂ ಯೋಗ್ಯ ಬೆಲೆ ನೀಡಿ ಮುಂದಿನ ಸರಕಾರದ ಆದೇಶದವರೆಗೆ ಖರೀದಿಸಬಹುದು. ಪ್ರತಿಯೊಬ್ಬ ರೈತರಿಗೂ ಅವರ ಉತ್ಪನ್ನಗಳ ತೂಕ ಮತ್ತು ಮೌಲ್ಯವನ್ನುನಮೂದಿಸಿ ಎಪಿಎಂಸಿ ನಿಯಮಾನುಸಾರವಾಗಿ ರಶೀದಿ ನೀಡತಕ್ಕದ್ದು, ಯಾವುದೇ ಷರತ್ತುಗಳನ್ನು ಉಲ್ಲಂಘಿಸಿದಲ್ಲಿ ತಮ್ಮ ವ್ಯಾಪಾರ ಪರವಾನಗಿಯನ್ನು ರದ್ದುಗೊಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ