ಸುಡುಬಿಸಿಲಲ್ಲಿ ಬೀದಿಗಿಳಿದು ನಮ್ಮ ‘ಆರೋಗ್ಯ’ ರಕ್ಷಣೆ ಮಾಡಿದ ಇಲಾಖೆ – covid warriors

  • 58 ಗ್ರಾಮ, 1 ಪುರಸಭೆ, 1 ಪಟ್ಟಣ ಪಂಚಾಯತ್ ಯೋಗಕ್ಷೇಮ ನಿರ್ವಹಿಸಿದ ಹೆಲ್ತ್ ಡಿಪಾರ್ಟ್ ಮೆಂಟ್

ಜಾಹೀರಾತು

STAY HOME, STAY SAFE ಎಂದು ನಾವು ನೀವೆಲ್ಲ ಮನೆಯೊಳಗಿದ್ದಾಗ, ಬಿಸಿಲಲ್ಲಿ ನಡೆದುಕೊಂಡು ಬಂದು, ನಮ್ಮ ಮನೆಯ ಕದವ ತಟ್ಟಿ ನಿಮ್ಮಲ್ಲಿ ಅನಾರೋಗ್ಯಪೀಡಿತರು ಯಾರಾದರೂ ಇದ್ದಾರೆಯೇ ಎಂದು ವಿಚಾರಿಸಿ ಸಂಜೆವರೆಗೂ ನಡೆದುಕೊಂಡೇ ಹೋಗಿ, ಲೆಕ್ಕವನ್ನು ಕೊಟ್ಟು ಮನೆಗೆ ಮರಳಿ ತಮ್ಮ ತಂದೆ, ತಾಯಿ, ಪತಿ, ಮಕ್ಕಳ ಮುಖ ನೋಡುವ ಸುಮಾರು 350ಕ್ಕೂ ಅಧಿಕ ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆಯರು, 73 ಮಂದಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು, ಶುಶ್ರೂಷಕರು, ಎಲ್ಲರ ಆರೋಗ್ಯದ ಕುರಿತು ನಿಗಾ ಇರಿಸಿ ರಿಪೋರ್ಟ್ ಕೊಡುತ್ತಿದ್ದ ಪಿಎಚ್ ಸಿ, ಟಿಎಚ್ ಸಿಯ ವೈದ್ಯರು, ಇವರೆಲ್ಲರೊಂದಿಗೆ ಪ್ರತಿದಿನದ ಇಪ್ಪತ್ತನಾಲ್ಕು ತಾಸೂ ಅಲರ್ಟ್ ಆಗಿ ಬಂಟ್ವಾಳ ತಾಲೂಕಿನ ಆರೋಗ್ಯ ಸ್ಥಿತಿಗತಿ ಕುರಿತು ನಿಗಾ ಇರಿಸಿ, ಕೋವಿಡ್ 19 ವಿರುದ್ಧ ಹೋರಾಟದಲ್ಲಿ ಮುನ್ನಡೆಯುತ್ತಿರುವ ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು. ಮನೆಯಲ್ಲಿ ಕುಳಿತು ನಾವು ನೀವು ಸೇಫ್ ಆಗಬೇಕಿದ್ದರೆ, ಬಂಟ್ವಾಳದ ತಾಲೂಕಾಡಳಿತ, ತಾಲೂಕು ಪಂಚಾಯತ್, ಟಾಸ್ಕ್ ಫೋರ್ಸ್, ಪೊಲೀಸ್ ಇಲಾಖೆಯ ಜೊತೆ ಎಲ್ಲರ ಆರೋಗ್ಯದ ಕುರಿತು ಕಣ್ಣಲ್ಲಿ ಕಣ್ಣಿಟ್ಟು ಕಾಳಜಿ ವಹಿಸುತ್ತಿರುವ ಆರೋಗ್ಯ ಇಲಾಖೆ ಕೆಲಸ ಅನನ್ಯ. ಇವರು covid warriors.

ಇಂದು ಬಂಟ್ವಾಳ ತಾಲೂಕು ಎರಡನೇ ಹಂತದ LOCKDOWN ಗೆ ಸಜ್ಜಾಗಿದೆ. ನೀವು ಮನೆಯಲ್ಲಿರಿ, ಸೇಫ್ ಆಗಿರಿ ನಾವು ಬಂದು ನಿಮ್ಮ ಆರೋಗ್ಯ ವಿಚಾರಿಸಿದಾಗ ನಮಗೆ ಮಾಹಿತಿ ನೀಡಿ ಎನ್ನುತ್ತಾರೆ ಆರೋಗ್ಯ ಇಲಾಖೆ ಸಿಬ್ಬಂದಿ. 

ಬಂಟ್ವಾಳ ತಾಲೂಕಿನ ಹಲವು ಕಡೆಗಳಲ್ಲಿ ಬೀಡುಬಿಟ್ಟಿರುವ ವಲಸೆ ಕಾರ್ಮಿಕರನ್ನು ಬುಧವಾರ ಸಂದರ್ಶಿಸಿದ ಆರೋಗ್ಯ ಇಲಾಖೆ ಅಧಿಕಾರಿಗಳಾದ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ವೈದ್ಯಾಧಿಕಾರಿ ಮತ್ತು ತಂಡ ತಪಾಸಣೆ ನಡೆಸಿತು. ಪ್ರತಿ ವಾರ ಕಾರ್ಮಿಕರ ಭೇಟಿಯನ್ನು ಇಲಾಖೆ ನಡೆಸುತ್ತಿದೆ.

ಪ್ರತಿ ಟಾಸ್ಕ್ ಫೋರ್ಸ್ ಗಳ ಮೀಟಿಂಗ್ ಗಳಲ್ಲೂ ಆರೋಗ್ಯ ಇಲಾಖೆ ಅಧಿಕಾರಿಗಳು ಭಾಗವಹಿಸುತ್ತಿದ್ದಾರೆ. 17 ಪ್ರಾಥಮಿಕ ಆರೋಗ್ಯ ಕೇಂದ್ರ ಸಹಿತ 21 ಆರೋಗ್ಯ ಕೇಂದ್ರದವರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮನೆ ಮನೆಗೆ ಭೇಟಿ ಕೊಟ್ಟು ಎಲ್ಲಿ ಜ್ವರ ಪ್ರಕರಣ ಇರುವುದನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ. ಯಾರಲ್ಲಿ ರೋಗಲಕ್ಷಣ ಕಾಣಿಸುತ್ತಿದೆಯೋ ಅವರ ಗಂಟಲು ದ್ರವ ಮಾದರಿ ಪರೀಕ್ಷೆ ಮಾಡುತ್ತಿದ್ದಾರೆ. 

ಜಾಹೀರಾತು

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ಸುಡುಬಿಸಿಲಲ್ಲಿ ಬೀದಿಗಿಳಿದು ನಮ್ಮ ‘ಆರೋಗ್ಯ’ ರಕ್ಷಣೆ ಮಾಡಿದ ಇಲಾಖೆ – covid warriors"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*