ಬಂಟ್ವಾಳ

ಪೊಸಳ್ಳಿ ಸಂಪರ್ಕ ರಸ್ತೆಯಲ್ಲಿ ಬೃಹತ್ ಹೊಂಡ

ಬಿ.ಸಿ.ರೋಡ್ ರೈಲ್ವೆ ಮಾರ್ಗದ ಬಳಿಯೇ ಇರುವ ಪೊಸಳ್ಳಿಯನ್ನು ಸಂಪರ್ಕಿಸುವ ರಸ್ತೆಯಲ್ಲಿ ಬೃಹತ್ ಹೊಂಡವೊಂದು ಕಳೆದ ಕೆಲ ದಿನಗಳಿಂದ ಕಂಡುಬಂದಿದ್ದು, ಅಪಾಯಕಾರಿಯಾಗಿದೆ. ಬುಧವಾರ ಇಲ್ಲಿ ವ್ಯಕ್ತಿಯೊಬ್ಬ ಆಯತಪ್ಪಿ ಬಿದ್ದರೆ, ಗುರುವಾರ ಬೆಳಗ್ಗೆ ಹಸುವೊಂದು ಬಿದ್ದು ಪರದಾಡಬೇಕಾಯಿತು. ರೈಲ್ವೆ ಟ್ರ್ಯಾಕ್ ಗೆ ಸಮಾನಾಂತರವಾಗಿ ಇರುವ ಈ ರಸ್ತೆಯು ಬ್ರಹ್ಮಶ್ರೀ ನಾರಾಯಣಗುರು ವೃತ್ತಕ್ಕೆ ಸೇರುತ್ತದೆ. ಇಲ್ಲಿ ಸುತ್ತಮುತ್ತಲು ಕೆಲ ಮನೆಗಳಿದ್ದು, ಹತ್ತಿರದಲ್ಲಿ ಕುಲಾಲ ಸಮುದಾಯ ಭವನವೂ ಇದೆ. ಈ ಪರಿಸರದಲ್ಲಿ ಹಲವಾರು ಮಂದಿ ದಿನನಿತ್ಯ ನಡೆದುಕೊಂಡು ಹೋಗುತ್ತಿದ್ದು, ಜಾನುವಾರುಗಳೂ ಸಂಚರಿಸುತ್ತವೆ. ಆದರೆ ಘನ ವಾಹನವೊಂದರ ಆಘಾತದಿಂದ ರಸ್ತೆ ಕುಸಿದಿದೆ ಎನ್ನಲಾಗಿದ್ದು, ಇದಕ್ಕೆ ಪರಿಹಾರ ಕ್ರಮವನ್ನು ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಜಾಹೀರಾತು

www.bantwalnews.com ಸಂಪಾದಕ: ಹರೀಶ ಮಾಂಬಾಡಿ. ದೂರವಾಣಿ 9448548127

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ