ಅಲ್ಪಸಂಖ್ಯಾತರ ಮೇಲೆ ಹಲ್ಲೆ, ಹಾಗೂ ಅಮಾಯಕ ಪ್ರತಿಭಟನಾಕಾರರ ವಿರುದ್ಧ ದೌರ್ಜನ್ಯ ಎಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚನೆ ನೀಡುವಂತೆ ರಾಷ್ಟ್ರಪತಿಗಳಿಗೆ ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್. ಮೂಲಕ ಸಿಎಎ, ಎನ್.ಪಿ.ಆರ್, ಎನ್.ಆರ್.ಸಿ. ವಿರೋಧಿ ಪ್ರತಿಭಟನಾ ಸಮಿತಿಯ ಬಂಟ್ವಾಳ ತಾಲೂಕು ಸಮಿತಿ ಒತ್ತಾಯಿಸಿ ಮನವಿಯೊಂದನ್ನು ಶುಕ್ರವಾರ ಸಂಜೆ ಸಲ್ಲಿಸಿತು.
ಕಾರ್ಯಾಧ್ಯಕ್ಷ ಕೆ.ಎಚ್.ಅಬುಬಕ್ಕರ್, ಪ್ರಧಾನ ಕಾರ್ಯದರ್ಶಿ ಪಿ.ಎ.ರಹೀಂ ಪ್ರಮುಖರಾದ ಮಹಮ್ಮದ್ ಶಫಿ, ಅನ್ವರ್ ಕಲ್ಲಂಗಳ, ಮುನೀಷ್ ಆಲಿ, ಹಾರೂನ್ ರಶೀದ್, ಹಾರಿಸ್ ಪೆರಿಯಪಾದೆ, ಅಮಾನುಲ್ಲಾ ಬೋಗೋಡಿ ಅವರನ್ನೊಳಗೊಂಡ ಸಮಿತಿ ಸದಸ್ಯರು ಮನವಿ ಸಲ್ಲಿಸಿದ್ದಾರೆ.
www.bantwalnews.com Editor: Harish Mambady