ಬಂಟ್ವಾಳ ಬೈಪಾಸ್ ರಸ್ತೆಯ ಅಜೆಕಲದಲ್ಲಿ ನೂತನ ಭಂಡಾರಿ ಸಭಾ ಭವನದ ಉದ್ಘಾಟನಾ ಸಮಾರಂಭವು ಡಿಸೆಂಬರ್ 15 ಆದಿತ್ಯವಾರ ದಂದು ಬೆಳಿಗ್ಗೆ ಗಂಟೆ 7:00 ರಿಂದ 8:00 ಗಂಟೆಯ ವರೆಗೆ ಗಣಹೋಮ ನಂತರ ಸಭಾಭವನದ ಮುಖ್ಯದ್ವಾರ ಉದ್ಘಾಟನೆಯನ್ನು ಬೇಬಿ ಐಶಾನಿ ಅನೂಪ್ ಪುಣ್ಕೆದಡಿ ಕಕ್ಯಪದವು ಉದ್ಘಾಟಿಸಲಿದ್ದಾರೆ ಬೆಳಿಗ್ಗೆ ಗಂಟೆ 9:00 ರಿಂದ 10:30 ರ ತನಕ ಶ್ರೀ ಸತ್ಯನಾರಾಯಣ ದೇವರ ಪೂಜೆ ನಡೆಯಲಿದೆ
ಸಭಾಭವನದ ವೇದಿಕೆಯ ಉದ್ಘಾಟನೆಯನ್ನು ಲೀಲಾವತಿ ಸದಾಶಿವ ಭಂಡಾರಿ ಹೊಸ್ಮಾರು ಬಂಟ್ವಾಳ ಉದ್ಘಾಟಿಸಲಿದ್ದಾರೆ ಮುಖ್ಯ ಅತಿಥಿಗಳಾಗಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ , ಮಾಜಿ ಸಚಿವ ರಮಾನಾಥ ರೈ , ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಅಧ್ಯಕ್ಷ ಸುರೇಶ್ ಭಂಡಾರಿ ಕಡಂದಲೆ , ಭಂಡಾರಿ ಮಹಾಮಂಡಳದ ಅಧ್ಯಕ್ಷ ಸದಾಶಿವ ಭಂಡಾರಿ ಸಕಲೇಶಪುರ ಆಗಮಿಸಲಿದ್ದಾರೆ ಭಂಡಾರಿ ಸಮಾಜ ಬಾಂಧವರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಬಂಟ್ವಾಳ ಭಂಡಾರಿ ಸಭಾಭವನದ ಉದ್ಘಾಟನಾ ಸಮಾರಂಭದ ಶುಭ ಕಾರ್ಯಕ್ರಮಕ್ಕೆ ಸಹಕರಿಸಿ ಪ್ರೋತ್ಸಾಹಿಸ ಬೇಕಾಗಿ ಬಂಟ್ವಾಳ ಭಂಡಾರಿ ಸಮಾಜ ಸಂಘದ ಅಧ್ಯಕ್ಷ ದಿವಾಕರ ಶಂಭೂರು ತಿಳಿಸಿದ್ದಾರೆ
ಗೌರವ ಅಧ್ಯಕ್ಷ ಬಾಬು ಭಂಡಾರಿ ಅಜೆಕಲ , ಅಧ್ಯಕ್ಷ ದಿವಾಕರ ಶಂಭೂರು , ಕಾರ್ಯದರ್ಶಿ ಸದಾಶಿವ ಭಂಡಾರಿ ನಂದೊಟ್ಟು , ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು , ಬಂಟ್ವಾಳ ಭಂಡಾರಿ ಯುವ ಘಟಕದ ಅಧ್ಯಕ್ಷ ಶ್ರೀ ಡಾ. ಪ್ರಶಾಂತ್ ಕಲ್ಲಡ್ಕ ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರು , ಮಹಿಳಾ ಘಟಕದ ಅಧ್ಯಕ್ಷೆ ದಾಕ್ಷಾಯಿಣಿ ನಾಗೇಶ್ ಹಾಗೂ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರ ನೇತೃತ್ವದಲ್ಲಿ ಹಾಗೂ ದಾನಿಗಳ ಸಹಕಾರದೊಂದಿಗೆ ಬಂಟ್ವಾಳ ಭಂಡಾರಿ ಸಭಾಭವನ ಲೋಕಾರ್ಪಣೆಯಾಗಲಿದೆ.