ಜಿಲ್ಲಾ ಸುದ್ದಿ

ಪಂಪ್ ವೆಲ್ ಸಮೀಪ ಅಪಘಾತ: ಶಿಕ್ಷಕ ಮೃತ

ಮಂಗಳೂರಿನ ಪಂಪ್ ವೆಲ್ ಸಮೀಪ ಇಂದು ಸಂಜೆ ನಡೆದ ಅಪಘಾತದಲ್ಲಿ ಬಂಟ್ವಾಳ ಮೆಲ್ಕಾರ್ ರಂಗೇಲು ನಿವಾಸಿ ಹಮೀದ್ ಎಂಬವರ ಪುತ್ರ ಮದರಸ ಶಿಕ್ಷಣ ಅಧ್ಯಾಪಕ ಹಾಫಿಲ್ ತೌಸೀಫ್ (30)  ಮೃತಪಟ್ಟಿದ್ದಾರೆ.

ಜಾಹೀರಾತು

ತೊಕ್ಕೊಟು ಕಡೆಯಿಂದ ಪಂಪ್ ವೆಲ್ ಗೆ ಬರುತ್ತಿದ್ದಾಗ ಎಕ್ಕೂರಿನಲ್ಲಿ ಹಿಂದಿನಿಂದ ಬಂದ ಖಾಸಗೀ ಬಸ್ ಡಿಕ್ಕಿ ಯಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾಸರಗೋಡು ಮುಹಿಮ್ಮಾತ್ ಕಾಲೇಜಿನಿಂದ ಹಾಫೀಲ್ ಪದವಿ ಪಡೆದಿದ್ದ ತೌಸೀಫ್, ತರ್ತೀಲ್ ಅಕಾಡೆಮಿ ಮೂಲಕ ಮದರಸ ಶಿಕ್ಷಣ ಅಧ್ಯಾಪಕರಾಗಿ ಶಿಕ್ಷಣ ನೀಡುತ್ತಿದ್ದರು. ಇವರ ಪತ್ನಿಗೆ ಇತ್ತೀಚೆಗಷ್ಟೇ ಎರಡನೇ ಹೆರಿಗೆಯಾಗಿತ್ತು. ಅವರು ತಂದೆ, ತಾಯಿ, ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ