ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಬಂಟ್ವಾಳ ಪ್ರಖಂಡದ ಆಶ್ರಯದಲ್ಲಿ ಬಲಿಷ್ಠ ಹಿಂದೂ ಸಮಾಜ ಸತ್ ಸಂಕಲ್ಪದಲ್ಲಿ ಕೈ ಜೋಡಿಸುವ ಹಿತಚಿಂತಕ ಅಭಿಯಾನಕ್ಕೆ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದ ಸನ್ನಿಧಿಯಲ್ಲಿ ಸೋಮವಾರ ಚಾಲನೆ ನೀಡಲಾಯಿತು.
ಜಾಹೀರಾತು
ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಅವರು ಹಿತಚಿಂತಕ 2019 ಕರಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿ,ಬಲಿಷ್ಠ ಹಿಂದೂ ಸಮಾಜವನ್ನು ಕಟ್ಟುವ ದೆಸೆಯಲ್ಲಿ ಆರಂಭವಾಗಿರುವ ಈ ಅಭಿಯಾನಕ್ಕೆ ಹಿಂದೂ ಸಮಾಜ ಕೈಜೋಡಿಸಬೇಕು ಎಂದು ಕರೆ ನೀಡಿದರು.ಈ ಸಂದರ್ಭ ಶ್ರೀ ರಕ್ತೇಶ್ವರೀ ದೇವಳದ ಟ್ರಸ್ಟಿ ಬಿ.ಮೋಹನ್, ವಿಹಿಂಪನ ಜಿಲ್ಲಾ ಪ್ರಮುಖ ಸರಪಾಡಿ ಆಶೋಕ ಶೆಟ್ಟಿ, ಬಜರಂಗದಳದ ಪ್ರಮುಖರಾದ ಗುರುರಾಜ್ ಬಂಟ್ವಾಳ, ಅಕೇಶ್ ಬೆಂಜನಪದವು, ಸುರೇಶ್ ಬೆಂಜನಪದವು, ಸಂತೋಷ್ ನೇಲ್ಯಪಲ್ಕೆ, ಆಶ್ವಥ್ ಪುಂಜಾಲಕಟ್ಟೆ ಮಾದಲಾದವರಿದ್ದರು.
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. --- ಹರೀಶ ಮಾಂಬಾಡಿ, ಸಂಪಾದಕ
NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ಹಿತಚಿಂತಕ ಅಭಿಯಾನಕ್ಕೆ ಚಾಲನೆ"
Be the first to comment on "ಹಿತಚಿಂತಕ ಅಭಿಯಾನಕ್ಕೆ ಚಾಲನೆ"