ಬುಧವಾರ ರಾತ್ರಿಯಿಂದ ಗುರುವಾರದವರೆಗೆ ಭಾರಿ ಮಳೆಯಾದ ಕಾರಣ ನೇತ್ರಾವತಿ ನದಿ ನೀರಿನ ಮಟ್ಟ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ ಸೆಂಥಿಲ್, ಸಹಾಯಕ ಕಮೀಷನರ್ ರವಿಚಂದ್ರ ನಾಯಕ್ ,ಮತ್ತು ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್. ಆರ್ ಬಂಟ್ವಾಳದ ವಿವಿಧೆಡೆ ಭೇಟಿ ನೀಡಿ ಪರಿಶಿಲನೆ ನಡೆಸಿದರು.
ನದಿ ನೀರಿನ ಮಟ್ಟ ಬೆಳಗ್ಗಿನಿಂದಲೇ ಏರಿಳಿತ ಕಾಣುತ್ತಿದ್ದು, ಮಧ್ಯಾಹ್ನದ ವೇಳೆಗೆ ಅಪಾಯದ ಮಟ್ಟ (8.5) ಮೀರಿತ್ತು. ಇದೀಗ ನೇತ್ರಾವತಿ ಮಟ್ಟ 8.7 ಮೀಟರ್ ಇದ್ದು, ಪಾಣೆಮಂಗಳೂರು, ಬಂಟ್ವಾಳದ ತೀರ ಪ್ರದೇಶಗಳಲ್ಲಿ ನೀರು ಪ್ರವೇಶಿಸಿದೆ. ನದಿ ತೀರದ ಕೆಲ ಮನೆ, ಅಂಗಡಿಗಳಿಗೂ ನೀರು ನುಗ್ಗಿದ್ದು, ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ.
ಅಧಿಕಾರಿಗಳಾದ ಶಿವಣ್ಣ ಕನವಾರ್, ಪಾಣೆಮಂಗಳೂರು ಹೋಬಳಿ ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ, ಸಿಬ್ಬಂದಿಗಳಾದ ಸದಾಶಿವ ಕೈಕಂಬ, ಯಶೋಧ ಪಾಣೆಮಂಗಳೂರು ಮತ್ತಿತರರು ಅಧಿಕಾರಿಗಳ ಭೇಟಿ ಸಂದರ್ಭ ಜೊತೆಗಿ ಇದ್ದರು.