ನವೋದಯ ಮಿತ್ರ ಕಲಾವೃಂದ ವಾರ್ಷಿಕೋತ್ಸವ

ನವೋದಯ ಮಿತ್ರ ಕಲಾ ವೃಂದ (ರಿ )ಹಾಗೂ ನೇತ್ರಾವತಿ ಮಾತೃ ಮಂಡಳಿ ನೆತ್ರಕೆರೆ  32ನೇ ವಾರ್ಷಿಕೋತ್ಸವ ಇತೀಚೆಗೆ ನೆತ್ರೆಕೆರೆ ಶಾಲಾ ಮೈದಾನದಲ್ಲಿ ನಡೆಯಿತು.

ಜಾಹೀರಾತು

ಬೆಳಗ್ಗೆ ಅಶ್ವಥಕಟ್ಟೆಯಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆದು ಮದ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಯಾಗಿ ಶ್ರೀ ರಾಮ ಶಾಲೆ ಫರಂಗಿಪೇಟೆ ಶತಮಾನೋತ್ಸವ ಸಮಿತಿಯ  ಅಧ್ಯಕ್ಷರಾದ ಜಯರಾಮ ಶೇಕ ಮಾತನಾಡಿ ಸಂಘದ ಕಾರ್ಯಚಟುವಟಿಕೆಗಳನ್ನು ಮುಕ್ತ ಕಂಠದಿಂದ ಶ್ಲ್ಯಾಘಿಸಿದರು. ಈ ಸಂದರ್ಭದಲ್ಲಿ ನೆತ್ರೆಕೆರೆ ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕಿಯರಾದ ಸೀತಾಲಕ್ಷ್ಮಿ ಹಾಗೂ ರೇಣುಕಾ ಅವರನ್ನು ಸನ್ಮಾನಿಸಿ  ಸೇವೆಯ ಬಗ್ಗೆ ಸಂಘದ ಸಂಚಾಲಕರಾದ ದಾಮೋದರ ನೆತ್ರೆಕೆರೆ ಪ್ರಸ್ತಾಪನೆಯೊಂದಿಗೆ ಮಾತನಾಡಿದರು.

ಸಂಘದ ಅಧ್ಯಕ್ಷರಾದ ಸುರೇಶ ಭಂಡಾರಿ ಅರ್ಬಿ ಸ್ವಾಗತಿಸಿದರು.ಗೌರವಾಧ್ಯಕ್ಷ   ಸುಬ್ರಹ್ಮಣ್ಯ ರಾವ್ ಮಾತೃ ಮಂಡಳಿಯ ಸಂಚಾಲಕರಾದ ಲಲಿತಾ ಸುಂದರ್ ಶಾಲೆಯ ಮುಕ್ಯೋಪಾದ್ಯಾಯಿನಿ  ಗುಣರತ್ನ ಟೀಚರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷ ರಾದ ವಿಶ್ವನಾಥ ಕುಲಾಲ್ ವಂದಿಸಿದರು. ಸಂತೋಷ ನೇತ್ರೆಕೆರೆ ಸನ್ಮಾನ ಪತ್ರ ವಾಚಿಸಿದರು. ಸಂತೋಷ್ ಏನ್  ಕಾರ್ಯಕ್ರಮ ನಿರೂಪಿಸಿದರು. ನಂತರ ಶಾಲಾ ಮಕ್ಕಳ ಹಾಗೂ ಮಾತೃ ಮಂಡಳಿಯ ಸದಸ್ಯೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು ಹಾಗೂ ಸಂಘದ ಸದಸ್ಯರು ಅಭಿನಯಿಸಿದ “ಅಪುಜಿಂದ್ ಪನೊರ್ಚಿ “ಮತ್ತು  ಅತಿಥಿ ಕಲಾವಿದರ ನಟನೆಯ “ಆರ್ ಪನ್ಲೆಕ “ಎಂಬ ನಾಟಕಗಳು ಪ್ರದರ್ಶನವಾಯಿತು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ