ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ ಸೋಮವಾರ ಮಳೆಗಿಂತ ಜಾಸ್ತಿ ಗಾಳಿಯ ಅಬ್ಬರ ಕಂಡುಬಂದಿದ್ದು ಈ ಹಿನ್ನೆಲೆ ಹಲವೆಡೆ ಹಾನಿ ಸಂಭವಿಸಿದೆ.
ಬಾಳ್ತಿಲ ಗ್ರಾಮದ ಕುರ್ಪೆ ಮನೆಯ ಜೂಲಿಯಾನಾ ಪಾಯ್ಸ್ , ಚಾರ್ಲಿ ವೇಗಸ್ ಮನೆಯ ಮೇಲೆ ಮರ ಬಿದ್ದು ಮನೆಗೆ ಬಾಗಶ ಹಾನಿಯಾಗಿದೆ. ಬಾಳ್ತಿಲ ಗ್ರಾಮದ ಬಿ.ಆರ್.ನಗರದ ನಾರಾಯಣ ನಾಯ್ಕ ಮನೆ ಮೇಲೆ ಮರ ಬಿದ್ದು ಮನೆಗೆ ಬಾಗಶಃ ಹಾನಿಯಾಗಿದೆ. ಗೋಳ್ತಮಜಲು ಕೆ ಸಿ ರೋಡ್ ಎಂಬಲ್ಲಿ ಶೇಖರ ಪೂಜಾರಿ ಮನೆ ಮೇಲೆ ಮರ ಬಿದ್ದು ಭಾಗಶಃ ಹಾನಿ ಆಗಿದೆ.
ಗೋಳ್ತಮಜಲು ಗ್ರಾಮದ ಬಲ್ಲೆಕೋಡಿ ಎಂಬಲ್ಲಿ ಜೋಹರ ಅವರ ಮನೆ ಮೇಲೆ ಮರ ಬಿದ್ದು ಭಾಗಶಃ ಹಾನಿ ಆಗಿದೆ. ನರಿಕೊಂಬು ಗ್ರಾಮದ ಕೆದ್ದೇಲು ಎಂಬಲ್ಲಿ ಲೀಲಾವತಿ ಅವರ ವಾಸ್ತವ್ಯದ ಮನೆಗೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಬಡಗಕಜೆಕಾರು ಗ್ರಾಮದ ಮಡವು ಎಂಬಲ್ಲಿ ಮೀನಾಕ್ಷಿ ಪೂಜಾರಿ ಅವರ ಮನೆಗೆ ಗಾಳಿಯಿಂದ ವಾಸ್ತವ್ಯದ ಮನೆ ಭಾಗಶಃ ಹಾನಿಯಾಗಿದೆ.
ಬಾಳ್ತಿಲ ಗ್ರಾಮದ ದಾಸಕೋಡಿ ಮನೆಯ ನಾರಾಯಣ ಮೂಲ್ಯರವರ ಅಡಿಕೆ ತೋಟಕ್ಕೆ ಇವತ್ತಿನ ಗಾಳಿ ಮಳೆಯಿಂದ ಬಾಗಶಃ ಹಾನಿಯಾಗಿರುತದೆ.
ಕಡೇಶ್ವಾಲ್ಯ ಗ್ರಾಮದ ಅಳಕೆ ಎಂಬಲ್ಲಿ ಚಂದ್ರಾವತಿ ಶೆಟ್ಟಿ ಯವರ ವಾಸ್ತವ್ಯದ ಮನೆ ಮೇಲೆ ಮರ ಬಿದ್ದು ಭಾಗಶಃ ಹಾನಿ, ದ. ಕ.ಜಿ. ಪ. ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮಾಣಿಯ ಶಾಲೆ ಹಿಂಬದಿಯ ಬರೆ ಜರಿದು ಶಾಲಾ ಕಟ್ಟಡಕ್ಕೆ ತಾಗಿರುತ್ತದೆ ಹಾಗೂ ಶಾಲೆಯ ತಡೆಗೋಡೆಗೆ ಹಾನಿಯಾಗಿರುತ್ತದೆ ಎಂದು ಕಂದಾಯ ಇಲಾಖೆ ಮಾಹಿತಿ ತಿಳಿಸಿದೆ.