ರಾಷ್ಟ್ರಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಕ್ರೀಡಾಪಟು ತನ್ಮಯ ಎಂ. ಕೊಟ್ಟಾರಿ ಅವರನ್ನು ಬಂಟ್ವಾಳ ತಾಲೂಕು ಶ್ರೀ ಶಾರದಾಂಬಿಕಾ ಭಜನಾ ಸಂಘ ಶಾರದಾ ನಗರ ಸಜೀಪ ಮುನ್ನೂರು 60ನೇ ವಾರ್ಷಿಕೋತ್ಸವದ ಅಂಗವಾಗಿ ಬರ್ಪೆ ಫ್ರೆಂಡ್ಸ್ ಯೂನಿಯನ್ ಶಾರದಾನಗರ ಇದರ ವತಿಯಿಂದ ಎಂ.ಸುಬ್ರಹ್ಮಣ್ಯ ಭಟ್ ಸಮ್ಮಾನಿಸಿದರು.
ಪದಾಧಿಕಾರಿಗಳಾದ ಎಂ.ಮಹಾಬಲ ಕೊಟ್ಟಾರಿ, ಜಯಂತ ಗಟ್ಟಿ, ಅರವಿಂದ ಭಟ್, ಎಸ್.ಪದ್ಮನಾಭ ಕೊಟ್ಟಾರಿ, ಸೋಮಶೇಖರ, ವಿಶ್ವನಾಥ ಕೊಟ್ಟಾರಿ ಮತ್ತಿತರು ಉಪಸ್ಥಿತರಿದ್ದರು.