ಯಕ್ಷಮಿತ್ರರು ಕೈಕಂಬ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ, ಹವ್ಯಾಸಿ ಅರ್ಥಧಾರಿ ಸಂಕಪ್ಪ ಶೆಟ್ಟಿ ಅವರು ಜಯಪ್ರಕಾಶ ಶೆಟ್ಟಿ ಅವರನ್ನು ಸನ್ಮಾನಿಸಿದರು. ಪೆರ್ಮುದೆಯವರು ಸಣ್ಣ ವಯಸ್ಸಿನಲ್ಲೇ ಪ್ರೌಢ ಕಲಾವಿದರಾಗಿ ಹಿರಿಯ ಅನುಭವಿ ಕಲಾವಿದರೊಂದಿಗೆ ಸರಿಸಮಾನರಾಗಿ ಪ್ರದರ್ಶನ ನೀಡುತ್ತಿರುವುದು ಶ್ಲಾಘನೀಯ ಅವರ 28 ವರ್ಷಗಳ ಕಲಾಸೇವೆ ಮುಂದೆಯೂ ಯಶಸ್ವಿಯಾಗಿ ಸಾಗಲಿ ಎಂದು ಹಾರೈಸಿದರು. ಈ ಸಂದರ್ಭ ಮಾತನಾಡಿದ ಪೆರ್ಮುದೆ ಜಯಪ್ರಕಾಶ ಶೆಟ್ಟಿ, ನಾನು ಕಾಸರಗೋಡು ಜಿಲ್ಲೆಯವನಾದರೂ ಕನ್ನಡದ ನೆಲದಲ್ಲೇ ನನಗೆ ಹೆಚ್ಚು ಅಭಿಮಾನದ ಸನ್ಮಾನಗಳು ಸಂದಿವೆ. ಬಡತನದಲ್ಲಿದ್ದ ನಾನು ಅಪಹಾಸ್ಯಕ್ಕೆ ಗುರಿಯಾಗಿದ್ದೆ. ಇಂದು ಯಕ್ಷಗಾನ ಕ್ಷೇತ್ರ ದೊಡ್ಡ ಮನ್ನಣೆಯನ್ನು ನೀಡಿದೆ ಎಂದು ಹೇಳಿದರು.
ಇದೇ ವೇಳೆ ಹಿರಿಯರಾದ ಜಯಂತ ಶೆಟ್ಟಿ, ಪುರಸಭೆ ಸದಸ್ಯ ರಾಮಕೃಷ್ಣ ಆಳ್ವ, ಯಕ್ಷಮಿತ್ರರು ಬಳಗದ ಕಿಶೋರ್, ಭುಜಂಗ ಸಾಲಿಯಾನ್, ಸದಾಶಿವ ಕೈಕಂಬ, ಶಂಕರ ಶೆಟ್ಟಿ ಉಪಸ್ಥಿತರಿದ್ದರು. ಕಿಶೋರ್ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. --- ಹರೀಶ ಮಾಂಬಾಡಿ, ಸಂಪಾದಕ
NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ಕಲಾವಿದ ಪೆರ್ಮುದೆ ಜಯಪ್ರಕಾಶ್ ಶೆಟ್ಟಿ ಅವರಿಗೆ ಸನ್ಮಾನ"
Be the first to comment on "ಕಲಾವಿದ ಪೆರ್ಮುದೆ ಜಯಪ್ರಕಾಶ್ ಶೆಟ್ಟಿ ಅವರಿಗೆ ಸನ್ಮಾನ"