ತ್ಯಾಜ್ಯ ಬೇರ್ಪಡಿಸಿ ನೀಡದಿದ್ದರೆ ನಿರಾಕರಣೆ – ಬಂಟ್ವಾಳ ಪುರಸಭೆ ಪ್ರಕಟಣೆ

  • ಕಸ ವಿಂಗಡಣೆ ಮಾಡದಿದ್ದರೆ ಜೇಬಿಗೆ ಕತ್ತರಿ

ಜಾಹೀರಾತು

ಪುರಸಭೆಯ ತ್ಯಾಜ್ಯ ವಿಲೇವಾರಿ ವಾಹನದ ಸಿಬ್ಬಂದಿ ಕೈಗೆ ಪ್ರತಿ ದಿನ ಬೆಳಗ್ಗೆ ವಿಂಗಡಿಸದ ಕಸವನ್ನು ಯಥಾವತ್ತಾಗಿ ನೀಡಲು ಹೋಗುವ ಪರಿಪಾಠ ಮುಂದುವರಿಸಿದರೆ ನಿಮ್ಮ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆ ಇದೆ.

ತ್ಯಾಜ್ಯದಲ್ಲಿ ಹಸಿ ತ್ಯಾಜ್ಯ ಹಾಗೂ ಒಣ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ವಿಂಗಡಿಸಲೇಬೇಕೆಂದು ಈಗಾಗಲೇ ಸಾಕಷ್ಟು ಪ್ರಚಾರವನ್ನೂ ನೀಡಿದೆ. ಕಸವನ್ನು ವಿಂಗಡಿಸದೇ ಇದ್ದರೆ ದಂಡ ವಿಧಿಸುವುದಾಗಿಯೂ ಈಗಾಗಲೇ ಸಾಕಷ್ಟು ಬಾರಿ ಹೇಳಿದೆ. ಬಂಟ್ವಾಳ ಪುರಸಭೆ ನೀಡುತ್ತಿದ್ದ ಈ ಎಚ್ಚರಿಕೆ ಇನ್ನು ಕೇವಲ ಎಚ್ಚರಿಕೆಯಾಗಿ ಮಾತ್ರವೇ ಉಳಿಯುವುದಿಲ್ಲ.

ಪುರಸಭೆಯ ಕಸ ವಿಲೇವಾರಿ ವಾಹನಗಳಿಗೆ ಕಸವನ್ನು ನೀಡುವ ವಿಧಾನವನ್ನು ಬಂಟ್ವಾಳ ಪುರಸಭೆ ಶನಿವಾರ ಜೂನ್ 30ರಂದು ಪ್ರಕಟಿಸಿದ್ದು, ತ್ಯಾಜ್ಯವನ್ನು ಬೇರ್ಪಡಿಸಿ ನೀಡುವುದು ಕಡ್ಡಾಯವಾಗಿದೆ ತಪ್ಪಿದಲ್ಲಿ 2 ಸಾವಿರ ರೂಗಳಿಂದ 5 ಸಾವಿರ ರೂವರೆಗೆ ದಂಡ ವಿಧಿಸಲಾಗುವುದು ಎಂದು ಹೇಳಿದೆ.

ಜುಲೈ 1ರಿಂದ ಈ ನಿಯಮ ಜಾರಿಗೆ ಬರಲಿದ್ದು, ಇದರಂತೆ ಜುಲೈ 1ರಿಂದ ಬಂಟ್ವಾಳ ಪುರಸಭೆಯ ಪ್ರತಿ ಮಳಿಗೆ, ಮನೆ, ಹೋಟೆಲ್ಗಳಿಂದ ಉತ್ಪತ್ತಿಯಾಗುವ ತ್ಯಾಜ್ಯವನ್ನು ಮಿಶ್ರಣ ಮಾಡಿ ನೀಡುವಂತಿಲ್ಲ, ಅದನ್ನು ಬೇರ್ಪಡಿಸಿ ನೀಡಲೇಬೇಕು. ಒಂದು ವೇಳೆ ಮಿಶ್ರ ಮಾಡಿ ನೀಡಿದರೆ ಇದನ್ನು ಕಸ ತೆಗೆದುಕೊಂಡು ಹೋಗುವ ವಾಹನದವರು ನಿರಾಕರಿಸಬಹುದು ಎಂದು ತಿಳಿಸಿದೆ.

ಹೇಗಿದೆ ನಿಯಮ:

ಪುರಸಭೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದಂತೆ ನಿಯಮ ಹೀಗಿದೆ. ವಾರದ ಸೋಮವಾರದಿಂದ ಗುರುವಾರ ತನಕ ಹಸಿಕಸ ಮಾತ್ರ ಮತ್ತು ಬಳಕೆ ಮಾಡಿದ ಪ್ಲಾಸ್ಟಿಕ್ ಹಾಗೂ ಇನ್ನಿತರ ಉಪಯೋಗಕ್ಕೆ ಬಾರದ ಸಾಮಾಗ್ರಿಗಳನ್ನು ಸ್ವಚ್ಛಗೊಳಿಸಿ ಪ್ರತಿ ಶುಕ್ರವಾರದ ಒಂದು ದಿನ ಒಣಕಸ ಮಾತ್ರ ವಿಂಗಡಿಸಿ ಬಂಟ್ವಾಳ ಪುರಸಭೆಯ ಕಸದ ವಾಹನಕ್ಕೆ ನೀಡತಕ್ಕದ್ದು ಎಂದು ಪುರಸಭೆ ಹೇಳಿದೆ.

ಬಂಟ್ವಾಳ ಪುರಸಭೆಯನ್ನು ಸ್ವಚ್ಛ ಸುಂದರ ಪುರಸಭೆಯನ್ನಾಗಿ ಮಾಡಲು ಸಾರ್ವಜನಿಕರ ಸಹಾಯ ಯಾಚಿಸಿರುವ ಪುರಸಭೆ, ತ್ಯಾಜ್ಯವನ್ನು ಬೇರ್ಪಡಿಸಿ ನೀಡುವುದು ನಾಗರಿಕರ ಜವಾಬ್ದಾರಿಯಾಗಿದೆ. ಇದಕ್ಕೆ ತಪ್ಪಿದಲ್ಲಿ ತಮ್ಮಲ್ಲಿ ಉತ್ಪಾದಿಸಿದ ತ್ಯಾಜ್ಯವನ್ನು ಪಡೆಯಲು ನಿರಾಕರಿಸಲಾಗುವುದು ಹಾಗೂ 2 ಸಾವಿರ ರೂಗಳಿಂದ 5 ಸಾವಿರ ರೂಗಳವರೆಗೆ ದಂಡ ವಿಧಿಸಲಾಗುವುದೆಂದು ಬಂಟ್ವಾಳ ಪುರಸಭೆ ಪ್ರಕಟಣೆಯಲ್ಲಿ ತಿಳಿಸಿದೆ. ಬಗ್ಗೆ ಸಾರ್ವಜನಿಕರು ಬಂಟ್ವಾಳ ಪುರಸಭೆಯೊಂದಿಗೆ ಸಹಕರಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.

ಜಾಹೀರಾತು

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ತ್ಯಾಜ್ಯ ಬೇರ್ಪಡಿಸಿ ನೀಡದಿದ್ದರೆ ನಿರಾಕರಣೆ – ಬಂಟ್ವಾಳ ಪುರಸಭೆ ಪ್ರಕಟಣೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*