ಬಂಟ್ವಾಳ ಕೋರ್ಟಿನ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಚಂದ್ರಶೇಖರ ಯು. ಬೀಳ್ಕೊಡುಗೆ ಸಮಾರಂಭ ವಕೀಲರ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಜೈನ್ ವಗ್ಗ ಅಧ್ಯಕ್ಷತೆಯಲ್ಲಿ ವಕೀಲರ ಸಂಘದ ಸಭಾಂಗಣದಲ್ಲಿ ಜರಗಿತು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಪ್ರತಿಭಾ ರೈ, ಪ್ರಧಾನ ಕಾರ್ಯದರ್ಶಿ ಆಶಾ ಪ್ರಸಾದ್, ಹಿರಿಯ ನ್ಯಾಯವಾದಿಗಳಾದ ಪುಂಡಿಕಾ ನಾರಾಯಣ ಭಟ್, ಎ.ಕೆ.ರಾವ್ ಉಪಸ್ಥಿತರಿದ್ದರು. ಗಿರೀಶ್ ವಂದಿಸಿದರು.