ಶುಕ್ರವಾರ ಎಸ್.ಡಿ.ಪಿ.ಐ.ನ ಅಭ್ಯರ್ಥಿ ರಿಯಾಝ್ ಫರಂಗಿಪೇಟೆ ಅವರು ಕಾರ್ಯಕರ್ತರೊಂದಿಗೆ ಬಂಟ್ವಾಳ ಮಿನಿ ವಿಧಾನಸೌಧದಲ್ಲಿ ನಾಮಪತ್ರ ಸಲ್ಲಿಸಿದರು.
ಬಿಜೆಪಿಯ ಹಾಗೂ ಕಾಂಗ್ರೇಸ್ನ ನೆಲಕಚ್ಚಿಸಲು ಸೋಶಿಯಲ್ ಡೆಮೋಕ್ರೆಟಿಕ್ ಪಾರ್ಟಿ ಸನ್ನದ್ದವಾಗಿದೆ ಎಂದು ಈ ಸಂದರ್ಭ ಅವರು ಸುದ್ದಿಗಾರರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಜಿಲಾಧ್ಯಕ್ಷ ಅತಾವುಲ್ಲಾ ಜೊಯಿಕಟ್ಟೆ, ಎಸ್ಡಿಪಿಐ ರಾಜ್ಯ ಕಾರ್ಯದರ್ಶಿ ಅಲ್ಫೋನ್ಸ್ ಫ್ರಾಂಕೊ, ಎಸ್ಡಿಟಿಯು ರಾಜ್ಯಧ್ಯಕ್ಷ ಜಲೀಲ್ ಕೆ., ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ಶಾಹುಲ್ ಎಸ್.ಎಚ್., ಜಿಲ್ಲಾ ಉಪಾಧ್ಯಕ್ಷ ಪಿ.ಡಿ ಆಂಟನಿ, ಆನಂದ್ ಮಿತ್ತಬೈಲ್ ಹಾಜರಿದ್ದರು.