ಸಾಂಸ್ಕೃತಿಕ

‘ತತ್ವ’: ದುಬೈ ನಗರದ ಸಂಕೀರ್ಣ ನೃತ್ಯ ಶಾಲೆಯ ವಾರ್ಷಿಕೋತ್ಸವ

ವರದಿ : ಆರತಿ ಅಡಿಗ , ಶಾರ್ಜಾ

ದುಬೈಯ ಭಾರತೀಯ ದೂತಾವಾಸದ ಸಭಾಂಗಣದಲ್ಲಿ ಏಪ್ರಿಲ್ 13 ಸಂಜೆ ಜರುಗಿದಸಂಕೀರ್ಣನೃತ್ಯ ಶಾಲೆಯ 6ನೇ ವಾರ್ಷಿಕೋತ್ಸವವನ್ನುಕಾರ್ಯಕ್ರಮದ ಅತಿಥಿಗಳು ,ಗುರು, ವಿದುಷಿ, ಶ್ರೀಮತಿ ಸಪ್ನಾ ಕಿರಣ್ ಹಾಗು ಶ್ರೀ ಕಿರಣ್ ಕುಮಾರ್ ಕದ್ರಿ ಯವರು ಸಾಂಪ್ರದಾಯಿಕ ಜ್ಯೋತಿಬೆಳಗುವುದರ ಮೂಲಕ ಉದ್ಘಾಟಿಸಿದರು .
ನಾಟ್ಯ ದೇವಾ ನಟರಾಜನಿಗೆ ಭಕ್ತಿ ಪೂರ್ವಕಪುಷ್ಪಾಂಜಲಿಯೊಂದಿಗೆ ನಾಟ್ಯ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟ ಸಂಕೀರ್ಣದ ವಿದ್ಯಾರ್ಥಿನಿಯರುನಂತರ ವಿಘ್ನ ವಿನಾಶಕ ಗಣಪನನ್ನು ಗಣೇಶ ಕೌತುವಂ ,ಶಕ್ತಿಯನ್ನು ಕಾಳಿ ಕೌತುವಂ ಮೂಲಕ, ಥೊಡ್ಯಾ ಮಂಗಳಂ ನಲ್ಲಿ ಮಹಾವಿಷ್ಣುವನ್ನು , ಭಕ್ತ ಕನಕದಾಸರ ಹಾಡಿನ ಮೂಲಕ ದೇವಿ ಸರಸ್ವತಿಯನ್ನು, ಪುರಂದರ ದಾಸರಭಾಗ್ಯದ ಲಕ್ಷ್ಮಿ ಬಾರಮ್ಮ ಮೂಲಕ ದೇವಿ ಲಕ್ಷ್ಮೀ ಗೆ ನಾಟ್ಯವಂದನೆ ಸಲ್ಲಿಸಿದರು .
ಅಡವು, ಅಜ್ಹಾಗು ದೇವಾ, ಆಡಿದ ನಾಡಿದ ,ಕೊರವಂಜಿ, ಗೋವಿಂದ ನಿನ್ನ , ಮುಂತಾದ ನೃತ್ಯ ವೈವಿದ್ಯಗಳಿಗೆ ಸಂಪೂರ್ಣ ನ್ಯಾಯ ಒದಗಿಸಿದನರ್ತಕಿಯರು ,ತುಂಟ ಕೃಷ್ಣ ಮುಗ್ದರಾಧೆಯರ ಬಾಲ್ಯದಾಟವನ್ನುವಿಷಮಕರ ಕಣ್ಣನ್ಮೂಲಕ ನರ್ತಿಸಿ ಜನರ ಮನ ಗೆದ್ದರು. ಅಯಗಿರಿನಂದಿನಿಯ ಮೂಲಕ ನವದುರ್ಗೆಯರು ನೆರೆದವರನ್ನು ರೋಮಾಂಚನಗೊಳಿಸಿದರೆ ,ಕೊನೆಯದಾಗಿ ಪ್ರದರ್ಶನಗೊಂಡಧರ್ಮಕ್ಷೇತ್ರಕೃಷ್ಣಾರ್ಜುನರಗೀತೋಪದೇಶದ ನೃತ್ಯವನ್ನು ಪ್ರೇಕ್ಷಕರು ಉಸಿರು ಬಿಗಿ ಹಿಡಿದು ನೋಡುವಂತಿತ್ತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಭರತನಾಟ್ಯ ಕಲಾವಿದೆ ಶ್ರೀಮತಿ ಚಂದ್ರಾ ಸುಬ್ರಮಣ್ಯನ್ ಗುರು ಸಪ್ನಾ ಕಿರಣ್ ರವರಪರಿಶ್ರಮವನ್ನು ಕೊಂಡಾಡಿ ಕಾರ್ಯಕ್ರಮದ ಗುಣಮಟ್ಟ ,ಶಿಸ್ತು ಹಾಗು ಅಚ್ಚುಕಟ್ಟುತನದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಇನ್ನೋರ್ವ ಅತಿಥಿ ಶ್ರೀಎನ್ . ಮೋಹನ್ ಅವರುಸಂಕೀರ್ಣದೊಂದಿಗಿನ ತಮ್ಮ ಕೆಲವು ವರ್ಷಗಳ ಒಡನಾಟವನ್ನು ಮೆಲುಕು ಹಾಕಿ ನೃತ್ಯ ಶಾಲೆಯ ಬೆಳವಣಿಗೆಗೆಹರ್ಷ ವ್ಯಕ್ತ ಪಡಿಸಿದರು.
ಅದ್ಭುತ ಸಂಗೀತ , ಸೂಕ್ತ ಹಾಡುಗಳು ,ಪ್ರತಿಭಾನ್ವಿತ ನೃತ್ಯ ಪಟುಗಳು, ಚಂದದ ವಸ್ತ್ರಭಾರಣಗಳು ಹಾಗು ನೈಪುಣ್ಯತೆಯ ನೃತ್ಯ ಸಂಯೋಜನೆ ಯ ಸುಂದರ. ಕಾರ್ಯಕ್ರಮವನ್ನು ಕಥೆ, ಇತಿಹಾಸ ,ಪುರಾಣ ಹಾಗು ವೇದಗಳ ನಿದರ್ಶನಗಳೊಂದಿಗೆ ಬಹಳ ಸೊಗಸಾದ ಭಾಷೆಯಲ್ಲಿ ಶ್ರುತಿ ಕಾರ್ತಿಕ್ನಿರೂಪಿಸಿದರು
ಗುರು ವಿದುಷಿ ಸಪ್ನಾ ಕಿರಣ್ ವಿದ್ಯಾರ್ಥಿಗಳ ಪ್ರದರ್ಶನಗಳಿಗೆ ಹೆಮ್ಮೆ ವ್ಯಕ್ತಪಡಿಸಿ ಅತಿಥಿಗಳಿಗೆ ,ಗುರುಗಳಿಗೆ ,ಹೆತ್ತವರಿಗೆ ,ಶಿಷ್ಯವೃಂದಕ್ಕೆ ,ಕುಟುಂಬವರ್ಗದವರಿಗೆ ಹಾಗು ನೆರೆದವರಿಗೆಲ್ಲಾ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದರು.
ಸಂಕೀರ್ಣನೃತ್ಯ ಶಾಲೆ, ದುಬೈ
2011ನೇ ಇಸವಿಯಲ್ಲಿ ಸಾಕಾರಗೊಂಡ ಗುರು , ವಿದುಷಿ ಶ್ರೀಮತಿ ಸಪ್ನಾ ಕಿರಣ್ ಅವರ ಸ್ವಪ್ನ ಇದು. ಇಲ್ಲಿ ಭಾರತದಾದ್ಯಂತದ ವಿದ್ಯಾರ್ಥಿನಿಯರುಭರತನಾಟ್ಯಮ್ ಅನ್ನು ಶಾಸ್ತ್ರೀಯವಾಗಿ ಗುರು ಪರಂಪರೆಯ ಮಾದರಿಯಲ್ಲಿ ಅಭ್ಯಾಸ ಮಾಡುತ್ತಾರೆ .ಗುಣಮಟ್ಟ ಹಾಗು ಸಾಂಪ್ರದಾಯಿಕ ಶೈಲಿಗೆಹೆಸರಾದಸಂಕೀರ್ಣಯು . . ಯಲ್ಲಿ ಹಾಗು ಭಾರತದಲ್ಲಿ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದು ಬಹುತೇಕ ಪ್ರತಿವರ್ಷವೂ ಇಲ್ಲಿನ ಒಂದುಅಥವಾ ಎರಡು ವಿದ್ಯಾರ್ಥಿನಿಯರು ರಂಗ ಪ್ರವೇಶ ಮಾಡುತ್ತಾರೆ.
ಕಿರುವಯಸ್ಸಿನಲ್ಲೇ ನೃತ್ಯಲೋಕಕ್ಕೆ ಪಾದಾರ್ಪಣೆ ಮಾಡಿದ ಗುರು ವಿದುಷಿ ಸಪ್ನಾಕಿರಣ್ ಸ್ವತಃ ಒಬ್ಬ ಅದ್ಭುತ ನೃತ್ಯಗಾರ್ತಿ , ರಂಗ ನಟಿ ಹಾಗೂಭರತನಾಟ್ಯ ಕಲಾವಿದರ ಕುಟುಂಬದಿಂದ ಬಂದವರು .
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ