www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಸೌರಮಾನ ಯುಗಾದಿ (ವಿಷು ಹಬ್ಬ) ಆಚರಣೆಯ ದಿನವಾದ ಭಾನುವಾರ ಬೆಳಗ್ಗೆ ಬಿ.ಸಿ.ರೋಡ್, ಬಂಟ್ವಾಳ ಸಹಿತ ದಕ್ಷಿಣ ಕನ್ನಡದ ನಿವಾಸಿಗಳಿಗೆ ದಟ್ಟ ಮೋಡ ಮತ್ತು ಮಳೆಯ ಸ್ವಾಗತ. ಕೆಲವೆಡೆ ಸೂರ್ಯೋದಯದ ಸೌಂದರ್ಯವನ್ನೇ ನೋಡಲಾಗದಷ್ಟು ಕಪ್ಪು ಮೋಡ ಆವರಿಸಿದ್ದರೆ, ಹಲವೆಡೆ ತುಂತುರು ಮಳೆಯಾಗಿದೆ.
ಬಂಟ್ವಾಳದಲ್ಲಂತೂ ರಾತ್ರಿಯಿಡೀ ಆಗಾಗ ವಿದ್ಯುತ್ ಕೈಕೊಟ್ಟು ಸಮಸ್ಯೆ ಉಂಟುಮಾಡಿತು. ವಿದ್ಯುತ್ ತಂತಿಗಳಲ್ಲಿ ಹನಿ ಬಿದ್ದರೂ ಕಡಿತ ಗ್ಯಾರಂಟಿ ಎಂಬ ನಾಗರಿಕರ ಹಾಸ್ಯಮಿಶ್ರಿತ ಟೀಕೆಯನ್ನೇ ಬಲಗೊಳಿಸುವಂತೆ ಕರೆಂಟು ಆಗಾಗ ಕೈಕೊಟ್ಟರೆ, ಗುಡುಗಿನ ಆರ್ಭಟ ಭಾನುವಾರವನ್ನು ಸ್ವಾಗತಿಸಿತು.