ಕಲ್ಲಡ್ಕ

ಸಮಾಜ ಸೇವೆಗೆ ಕುಟುಂಬ ಟೀಮ್

ಇಂದು ಹಲವಾರು ಸಂಘ, ಸಂಸ್ಥೆಗಳು ಹಳ್ಳಿ, ಪಟ್ಟಣ ಪರಿಸರದಲ್ಲಿ ಕಾರ್ಯಾಚರಿಸುತ್ತಿದ್ದರೂ, ಗ್ರಾಮೀಣ ಪ್ರದೇಶಗಳಲ್ಲಿ ಇವುಗಳ ಪ್ರಭಾವ ಜಾಸ್ತಿ. ಕಲ್ಲಡ್ಕ ಸಮೀಪ ನೆಟ್ಲ ಪರಿಸರದ ಯುವಕರ ತಂಡವೊಂದು ಸಮಾಜ ಸೇವೆಯನ್ನಷ್ಟೇ ಉದ್ದೇಶವಾಗಿಟ್ಟುಕೊಂಡು ಕಾರ್ಯಾಚರಣೆ ಆರಂಭಸಿವೆ. ಸಂಘಟನೆ ಹೆಸರು ಕುಟುಂಬ. ರಾಜಕೀಯ ಪಕ್ಷದ ಅಂಗಸಂಸ್ಥೆ ಇದಲ್ಲ ಎಂಬ ಟ್ಯಾಗ್ ಲೈನ್ ಇದಕ್ಕಿದೆ.

ಜಾಹೀರಾತು

ಮಾರ್ಚ್ 18ರಂದು ಶ್ರೀ ನಿಟಿಲಾಕ್ಷ ಸದಾಶಿವ ದೇವರಿಗೆ ಸಂಜೆ ಗೋಧೂಳಿ ಲಗ್ನದ ಶುಭ ಮುಹೂರ್ತದ ಯುಗಾದಿಯ ದಿವಸದಂದು ಪೂಜೆಯನ್ನು ಅರ್ಪಿಸುವ ಮೂಲಕ ಕುಟುಂಬ ಸಮಾಜಸೇವಾ ಸಂಸ್ಥೆ ಆರಂಭಗೊಂಡಿತು.

ಧನಂಜಯ ಗುಂಡಿಮಜಲು ಅಧ್ಯಕ್ಷರಾಗಿ ಹಾಗೂ ದಿನೇಶ್ ಕೆದ್ಲ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಕುಟುಂಬದಲ್ಲಿ ಕಾರ್ಯದರ್ಶಿಗಳು ಗೋಪಾಲಕೃಷ್ಣ ಗುಂಡಿಮಜಲು, ಪುರುಷೋತ್ತಮ ಗೋಳ್ತಮಜಲು. ಪ್ರಮುಖ ಸದಸ್ಯರಾಗಿ ಉದಯ ಕೊಟ್ಟಾರಿ ಮಡ್ಯಮಜಲು, ಲಕ್ಷ್ಮಣ ಬಳ್ಳಟ, ದಿನೇಶ್ ಪೂಜಾರಿ ವೀರಕಂಭ, ನವೀನ್ ಗುಂಡಿಮಜಲು, ನಾರಾಯಣ ಬಳ್ಳಟ. ಹೆಸರಿಗಷ್ಟೇ ಪದಾಧಿಕಾರಿಗಳು. ನಾವೆಲ್ಲರೂ ಅಧ್ಯಕ್ಷ, ಸದಸ್ಯ ಎಂಬ ಬೇಧವಿಲ್ಲದೆ ಒಟ್ಟಾಗಿ ಸಮಾಜಸೇವೆಗೆ ಧುಮುಕಿದ್ದೇವೆ ಎನ್ನುತ್ತಾರೆ ಕುಟಂಬದ ಟೀಮ್. ನಿಟಿಲಾಪುರದಲ್ಲಿ ನಡೆಯುವ ಬ್ರಹ್ಮಕಲಶ ಹಿನ್ನೆಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ನೀಲಿ ಬಣ್ಣದ ಟೀಶರ್ಟ್ ಧರಿಸಿದ ಕುಟುಂಬದ ಸದಸ್ಯರು ನೆರವೇರಿಸುವುದರ ಮೂಲಕ ಭಕ್ತರ ಪ್ರಶಂಸೆಗೂ ಪಾತ್ರರಾದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ