ವಿಟ್ಲ

ಅಂತರಂಗ ಅರಿಯಲು ಭಗವದ್ಗೀತೆ ಪೂರಕ: ಒಡಿಯೂರು ಶ್ರೀ

 

ಜಾಹೀರಾತು

ಗವದ್ಗೀತೆ ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಬದುಕನ್ನು ಹಸನಾಗಿಸುವುದಕ್ಕೆ ಬೆಳಕು ಅದರಲ್ಲಿದೆ. ಭಗವಂತನಿಂದಲೇ ಉಧೃತವಾದ ಗೀತೆಯಿಂದ ಆತ್ಮವಿಶ್ವಾಸ ವೃದ್ಧಿಸುತ್ತದೆ. ಆತ್ಮವಿಶ್ವಾಸ ಬಲವಾದರೆ ಜಯ ನಮ್ಮದಾಗುತ್ತದೆ. ಸುಖ ನಮ್ಮ ಅಂತರಂಗದಲ್ಲಿಯೇ ಅಡಗಿದೆ ಎಂಬುದನ್ನು ಅರಿಯಲು ಭಗವದ್ಗೀತೆ ಅವಶ್ಯಕ ಎಂದು ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಗೀತಾ ಜಯಂತಿಯ ಸಂದೇಶ ನೀಡಿದರು.

ಒಡಿಯೂರು ಶ್ರೀ ಸಂಸ್ಥಾನದಲ್ಲಿ ಶ್ರೀ ದತ್ತಜಯಂತಿಯ ಸುಸಂದರ್ಭ ಆಯೋಜಿಸಿದ್ದ ಶ್ರೀ ಗುರುಚರಿತ್ರೆ ಪ್ರವಚನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುತ್ತಾ ಗುರುತತ್ತ್ವದಲ್ಲಿ ಶ್ರೇಷ್ಠತೆ ಇದೆ. ಈ ಜಗತ್ತೇ ಒಂದು ವಿಶ್ವವಿದ್ಯಾನಿಲಯ. ಅದಕ್ಕಾಗಿಯೇ ಭಗವಾನ್ ಶ್ರೀ ದತ್ತಾತ್ರೇಯರು ಜಗತ್ತನ್ನೇ ಗುರುವಾಗಿ ಸ್ವೀಕರಿಸಿ ಜಗದ್ಗುರುಗಳಾದರು. ಜಗತ್ತಿನಿಂದ ಕಲಿಯಲು ನಮಗೂ ಬೇಕಾದಷ್ಟು ಇದೆ. ಕಲಿಗಾಲ ಎಂದರೆ ಕಲಿಯುವ ಕಾಲ. ಈ ಯುಗದಲ್ಲಿ ಶ್ರವಣಕ್ಕೆ ಬಹಳ ಮಹತ್ತ್ವವನ್ನು ಕೊಟ್ಟಿದ್ದಾರೆ. ಗುರುತತ್ತ್ವದ ವಿಚಾರಗಳನ್ನು ಶ್ರವಣ ಮಾಡಿ ಮನನ ಹಾಗೂ ನಿಧಿಧ್ಯಾಸನ ಮಾಡಿದರೆ ಬದುಕಿನಲ್ಲಿ ಸಿಗುವ ಸಂತಸ ಇನ್ನೊಂದರಲ್ಲಿ ಇಲ್ಲ. ಗುರುತತ್ತ್ವಕ್ಕೆ ಆಕರ್ಷಣಾ ಶಕ್ತಿಯಿದೆ. ಆತ್ಮವಿಶ್ವಾಸವನ್ನು ತುಂಬುವ ಕಾರ್ಯ ಗುರುಚರಿತ್ರೆ ಮಾಡುತ್ತದೆ. ಬದುಕಿಗೆ ಬೆಳಕು ನೀಡುವ ದಾರಿಯಲ್ಲಿ ನಡೆಯುವುದಕ್ಕೆ ಗುರುಚರಿತ್ರೆ ಸಹಕಾರಿ. ವಾಮನಾವತಾರದಲ್ಲಿ ವಾಮನ ಕಾಮ-ಕ್ರೋಧ, ಲೋಭ, ಮದ, ಮತ್ಸರಗಳನ್ನು ಮೆಟ್ಟಿ ನಿಂತು ನಾನು, ನನ್ನದು, ನನ್ನಿಂದಾದುದು ಶೂನ್ಯ ಎಂಬುದನ್ನು ಬಲಿಗೆ ಬೋಧಿಸಿದ. ಹಾಗೆಯೇ ಒಳ್ಳೆಯ ವಿಚಾರಗಳಲ್ಲಿ ನಮ್ಮನ್ನು ತೊಡಗಿಸಿಕೊಂಡಾಗ ಮೋಕ್ಷ ಪ್ರಾಪ್ತವಾಗುವುದರಲ್ಲಿ ಸಂದೇಹ ಬೇಡ ಎಂದರು. ಮಲಾರು ಜಯರಾಮ ರೈ ಶ್ರೀ ಗುರುಚರಿತ್ರೆ ಪ್ರವಚನಗೈದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ