ವಿಟ್ಲ

ಒಂದೆಡೆ ಡಾಂಬರು, ಮತ್ತೊಂದೆಡೆ ಹೊಂಡ

www.bantwalnews.com

ಒಂದೆಡೆ ಡಾಂಬರು ತೇಪೆ ಹಾಕುವ ಕಾರ್ಯ ನಡೆಯುತ್ತಿದ್ದರೆ, ಇನ್ನೊಂದೆಡೆ ಕಿತ್ತುಹೋಗಿ ಹೊಂಡ ಏಳುತ್ತಿದೆ.

ಜಾಹೀರಾತು

ಇದು ಕುದ್ದುಪದವು ಬಾಳಶೆಟ್ಟಿಮೂಲೆ ರಸ್ತೆಯ ಕತೆ. ಜನರ ಬಹು ಬೇಡಿಕೆಯ ನಂತರ ಅನುದಾನ ಬಿಡುಗಡೆಯಾಗಿ ಗುಂಡಿ ಮುಚ್ಚುವ ಕಾರ್ಯ ಆರಂಭವಾಗಿದೆಯಾದರೂ, ಡಾಮರ್ ಹಾಕಿ ಮುಂದುವರಿಯುತ್ತಿದ್ದಂತೆ ಹಿಂದಿನದು ಏಳಲಾರಂಬಿಸಿದೆ.

ಜಾಹೀರಾತು

ಕರ್ನಾಟಕ ಕೇರಳ ಸಂಪರ್ಕಿಸುವ ಅಂತರಾಜ್ಯ ರಸ್ತೆಯ ಕುದ್ದುಪದವು – ಪೆರುವಾಯಿ – ಬಾಳಶೆಟ್ಟಿಮೂಲೆ ವರೆಗಿನ 8.78 ಕಿಮೀಯನ್ನು 2009ರಲ್ಲಿ ಸುಮಾರು 399.55 ಲಕ್ಷ ರೂಪಾಯಿ ವೆಚ್ಚದಲ್ಲಿ ಮರು ನಿರ್ಮಾಣ ಮಾಡಲಾಗಿತ್ತು ಆದರೆ ಮೂರು ವರ್ಷಗಳ ಬಳಿಕ ರಸ್ತೆ ತನ್ನ ನಿಜಸ್ವರೂಪ ಪ್ರದರ್ಶಿಸಿತು.

ಕಳಪೆ ಕಾಮಗಾರಿ ಆಗಿರುವ ಬಗ್ಗೆ ಲೋಕಾಯುಕ್ತಕ್ಕೆ ಸಾಮಾಜಿಕ ಹೋರಾಟಗಾರ ಮುರುವ ಮಹಾಬಲ ಭಟ್ ಅವರು ದೂರು ನೀಡಿ ಎರಡು ಬಾರಿ ತನಿಖೆಯೂ ನಡೆಯುತು. ಆದರೆ ಭಾಗಶಃ ರಸ್ತೆ ಸರಿ ಇದೆ ಎಂಬ ರಿಪೋರ್ಟ್ ಬಂತು. ಆದರೂ ಪಟ್ಟುಬಿಡದಜನರು ನಾಲ್ಕು ಐದು ವರ್ಷಗಳಿಂದ ಹಳ್ಳಗಳಲ್ಲಿ ಎದ್ದು ಬಿದ್ದು ಸಂಚರಿಸುತ್ತಾ, ಜನಪ್ರತಿನಿಧಿಗಳಿಗೆ ಬೇಡಿಕೆ ಸಲ್ಲಿಸುತ್ತಲೇ ಬಂದರು.

ಕೊನೆಗೂ 14 ಲಕ್ಷ ರೂ ಶಾಸಕರ ವಿಶೇಷ ಅನುದಾನದಲ್ಲಿ ಗುಂಡಿ ಮುಚ್ಚುವ ಕಾರ್ಯ ಜಿಲ್ಲಾ ಪಂಚಾಯಿತಿ ಇಂಜಿನಿಯರ್ಗಳ ಉಸ್ತುವಾರಿಯಲ್ಲಿ ಆರಂಭವಾಯಿತು. ಮಾರನೆ ದಿನ ಅದರ ಮೇಲೆ ಘನ ವಾಹನ ಹೋಗುವಾಗಲೇ ಅದರ ನಿಜ ಬಣ್ಣ ಜನರಿಗೆ ತಿಳಿದಿದ್ದು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ