ಬಂಟ್ವಾಳ

250 ಹೆಕ್ಟೇರ್ ನಡುತೋಪುಗಳಲ್ಲಿ ಗೇರುಸಸಿ ನಾಟಿ: ಬಿ.ಎಚ್.ಖಾದರ್

ನಿಗಮದ ವ್ಯಾಪ್ತಿಯವ  ವಿವಿಧ ತಾಲೂಕಿನಲ್ಲಿರುವ ಸುಮಾರು 250 ಹೆಕ್ಟರ್ ನಡುತೋಪುಗಳಲ್ಲಿ ಉತ್ತಮ ತಳಿಯ ಹೆಚ್ಚು ಇಳುವರಿ ನೀಡುವ ಗೇರು ಸಸಿಗಳನ್ನು  ನಾಟಿ ಮಾಡಲಾಗಿದೆ ಎಂದು ಗೇರು ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್ ತಿಳಿಸಿದ್ದಾರೆ.

ಜಾಹೀರಾತು

ಪ್ರಸಕ್ತ ಸಾಲಿನಲ್ಲಿ ನಿಗಮದ ವತಿಯಿಂದ ಮಹಾರಾಷ್ಟ್ರದ ವೆಂಗುರ್ಲಾ-4 ತಳಿಯ ಕಸಿ ಗೇರು ಸಸಿಗಳನ್ನು ತರಿಸಲಾಗಿದ್ದು, ನಿಗಮದ  ಪುತ್ತೂರು,ಕುಂದಾಪುರ,ಕುಮುಟಾ ಹಾಗೂ ಮೂಡಬಿದ್ರೆ ವ್ಯಾಪ್ತಿಯ 250 ಹೆಕ್ಟರ್ ನಡುತೋಪುಗಳಲ್ಲಿ ನಾಟಿಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿರುವ ಅವರು ಮುಂದಿನ ದಿನಗಳಲ್ಲಿ ಫಸಲು ವೃದ್ದಿಯಾಗಿ ನಿಗಮದ ಅದಾಯವು ಹೆಚ್ಚಾಗುವ ನಿರೀಕ್ಷೆಯನ್ನು ಹೊಂದಲಾಗಿದೆ ಎಂದು ತೊಳಿಸಿದ್ದಾರೆ. ಹಾಗೆಯೇ ವೆಂಗುಲಾ-4 ತಳಿಯ ಸುಮಾರು 50,000 ಕಸಿ ಗೇರು ಸಸಿಗಳನ್ನು ರೈತರು, ಶಾಲಾ,ಕಾಲೇಜು, ಸಂಘ ಸಂಸ್ಥೆಗಳು, ಗ್ರಾಮ ಪಂಚಾಯತ್ ಗಳಿಗೆ ಉಚಿತವಾಗಿ ವಿತರಿಸುವ ಮೂಲಕ ಗೇರು ಕ್ರಷಿಗೆ ಉತ್ತೇಜನ ನೀಡಲಾಗುತ್ತಿದೆಯಲ್ಲದೆ ಪ್ರತಿ ಮನೆಗಳ ತಮ್ಮ ಖಾಲಿ ಜಾಗದಲ್ಲಿ ಗೇರು ಕೃಷಿಯನ್ನು ಬೆಳೆಸುವ ನಿಟ್ಟಿನಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ