ಆನೆಕಲ್ಲಿನ ಎಯುಪಿ ಶಾಲೆಯ ಹಳೆವಿದ್ಯಾರ್ಥಿ ಸಂಘದ ಮತ್ತು ವಾಚನಾಲಯದ ವತಿಯಿಂದ ಓಣಂ ಹಬ್ಬದ ಆಚರಣೆ ನಡೆಯಿತು. ಓಣಂ ಆಚರಣೆಯ ಅಂಗವಾಗಿ ಹಳೆವಿದ್ಯಾರ್ಥಿಗಳು ಪೂಕಲಮ್ ರಚಿಸಿ ದೀಪ ಬೆಳಗಿ ಬಲಿ ಚಕ್ರವರ್ತಿಯನ್ನು ಸಡಗರದಿಂದ ಆಹ್ವಾನಿಸಿದರು. ಓಣಂ ಹಬ್ಬದ ಅಂಗವಾಗಿ ಶಾಲಾ ಮುಖ್ಯೋಪಾಧ್ಯಯ ಶ್ರೀ ಸತ್ಯನಾರಾಯಣ ಭಟ್ ಹಬ್ಬದ ಬಗ್ಗೆ ಸಂಕ್ಷಿಪ್ತವಾಗಿ ಮಾತನಾಡಿದರು ಮತ್ತು ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಉಪಸ್ಥಿತರಿದ್ದರು