ಬಂಟ್ವಾಳ

ಸೌಹಾರ್ದತೆ, ಸಾಮರಸ್ಯದಿಂದ ಜೀವನ ನಡೆಸಿ: ನಾರಾಯಣ ಭಂಡಾರಿ

ಹಿಂಸೆಯನ್ನು ತ್ಯಜಿಸಿ ಅಹಿಂಸೆಯಿಂದ ಕೂಡಿ ಬಾಳಿದರೆ ಯಾವುದೇ ಕಾರ್ಯವನ್ನು ಸಾಸಬಹುದು. ಸೌಹಾರ್ದತೆ ಮತ್ತು ಸಾಮರಸ್ಯದಿಂದ ಕೂಡಿದ ಜೀವನವನ್ನು ನಡೆಸುವ ಮೂಲಕ ಕೋಮುವಾದವನ್ನು ಖಂಡಿಸಬೇಕು. ಆ ನಿಟ್ಟಿನಲ್ಲಿ ಯುವ ಜನತೆ ಕೈ ಜೋಡಿಸಿ ಸಮೃದ್ಧ ರಾಷ್ಟ್ರ ಕಟ್ಟುವ ಮಹತ್ಕಾರ್ಯದಲ್ಲಿ ಮುಂದಾಗಬೇಕು ಎಂದು ಶ್ರೀ ವೆಂಕಟರಮಣ ಸ್ವಾವಿ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ನಾರಾಯಣ ಭಂಡಾರಿ ನುಡಿದರು.

ಜಾಹೀರಾತು

ಕಾಲೇಜಿನಲ್ಲಿ ಎನ್.ಎಸ್.ಎಸ್ ಘಟಕದ ವತಿಯಿಂದ ಆಯೋಜಿಸಲಾದ ಸದ್ಘಾವನಾ ದಿನಾಚರಣೆಯ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಉಪಪ್ರಾಂಶುಪಾಲರಾದ ಪ್ರೊ. ತುಕಾರಾಂ ಪೂಜಾರಿ ವಹಿಸಿ ಸರ್ವಧರ್ಮಗಳ ಸಮನ್ವಯತೆಯ ಕಡೆಗೆ ನಾವು ದೃಷ್ಟಿ ಹರಿಸಬೇಕು. ಪರಸ್ಪರ ಪ್ರೀತಿ, ಸ್ನೇಹ, ಅನ್ಯೋನ್ಯತೆಯೊಂದಿಗೆ ನಾಗರಿಕ ಬದುಕನ್ನು ನಡೆಸುವಂತೆ ಕರೆಯಿತ್ತರು.

ಎನ್.ಎಸ್.ಎಸ್ ಯೋಜನಾಕಾರಿಗಳಾದ ಡಾ| ಮಂಜುನಾಥ ಉಡುಪ ಮತ್ತು ಕಿಟ್ಟು ರಾಮಕುಂಜ ಉಪಸ್ಥಿತರಿದ್ದರು. ಘಟಕ ನಾಯಕ ಕೀರ್ತನ್ ಸದ್ಭಾವನಾ ದಿನದ ಪ್ರತಿಜ್ಞಾ ವಿ ಬೋದರು. ಘಟಕ ನಾಯಕರಾದ ಪ್ರತೀಕ್ಷಾ ಸ್ವಾಗತಿಸಿ, ಸುಮಂತ್ ಎಸ್ ಕೆ ವಂದಿಸಿದರು. ಸ್ವಯಂ ಸೇವಕಿಯರಾದ ಶಿವಾನಿ, ಕ್ಷೆವಿನಾ, ರಕ್ಷಿತಾ, ಅಭಿಜ್ಞಾ ಭಾವೈಕ್ಯತಾ ಗೀತೆಯನ್ನು ಹಾಡಿದರು. ಘಟಕ ನಾಯಕಿ ಪಂಚಶ್ರೀ ಕಾರ್ಯಕ್ರಮ ನಿರ್ವಹಿಸಿದರು.

ಜಾಹೀರಾತು

 

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ