ಪಾಕಶಾಲೆಯೇ ವೈದ್ಯಶಾಲೆ

ಹಸುವಿನ ಹಾಲಿನ ತುಪ್ಪದಿಂದ ನೂರೆಂಟು ಲಾಭ

  • ಡಾ.ಎ.ಜಿ.ರವಿಶಂಕರ್
  • ಅಂಕಣ: ಪಾಕಶಾಲೆಯೇ ವೈದ್ಯಶಾಲೆ

ತುಪ್ಪ ಎಲ್ಲರಿಗೂ ತಿಳಿದಿರುವ ನಿತ್ಯೋಪಯೋಗಿ ದ್ರವ್ಯ. ಇದು ಇಲ್ಲದೆ ಕೆಲವರಿಗೆ ಊಟ  ಮುಂದೆ ಹೋಗುವುದಿಲ್ಲ. ಕ್ಷೀರ, ಹಲ್ವ ಇತ್ಯಾದಿ ಭಕ್ಷ್ಯಗಳಿಗೆ ತುಪ್ಪ ಬೇಕೇ ಬೇಕು. ಹಾಗೆಯೇ ಹೋಮ ಹವನಾದಿ  ವೈದಿಕ  ಕ್ರಿಯೆಗಳಿಗೂ ಬೇಕು. ಅದರಂತೆಯೇ ಮನೆ ಮದ್ದಿನ ಪಟ್ಟಿಯಲ್ಲಿ ತುಪ್ಪವು ಅಗ್ರ ಸ್ಥಾನವನ್ನು ಪಡೆಯುತ್ತದೆ.

ಜಾಹೀರಾತು

ಬಾಹ್ಯ ಉಪಯೋಗಗಳು :

  1. ಎಳೆ ಮಕ್ಕಳನ್ನು ದಿನಾ ತುಪ್ಪ ಹಚ್ಚಿ ಸ್ನಾನ ಮಾಡಿಸಿದರೆ ಚರ್ಮವು ನುಣ್ಣಗೆ ಮತ್ತು ಕಾಂತಿಯುತ ಆಗುತ್ತದೆ ಮತ್ತು ಶರೀರದ ಸಂಧು ಹಾಗು ಮೂಳೆಗಳು ದೃಢವಾಗುತ್ತದೆ.
  2. ಬೆಂಕಿ ಅಥವಾ ಬಿಸಿ ವಸ್ತುಗಳು ತಾಗಿ ಗಾಯವಾದಾಗ ತುಪ್ಪವನ್ನು ಹಚ್ಚಿದರೆ ಉರಿ ಬೇಗನೆ ಕಡಿಮೆಯಾಗುತ್ತದೆ ಮತ್ತು ಗಾಯ ಒಣಗಲು ಸಹಕರಿಸುತ್ತದೆ.
  3. ನಿದ್ರಾಹೀನತೆ ಇದ್ದಾಗ ತಲೆಗೆ ತುಪ್ಪ ಹಚ್ಚಿ 1 ಗಂಟೆ ಬಿಟ್ಟು ಸ್ನಾನ ಮಾಡಬೇಕು .
  4. ರಕ್ತದ ಒತ್ತಡ ಅಧಿಕವಿದ್ದಾಗ ಮದ್ದಿನ ಜೊತೆಗೆ ತುಪ್ಪವನ್ನು ನೆತ್ತಿಗೆ ಹಾಕಿದರೆ ಬೇಗನೆ ರಕ್ತದೊತ್ತಡವು ಸಮಸ್ಥಿತಿಗೆ ಬರುತ್ತದೆ.
  5. ಶರೀರದ ಉಷ್ಣತೆಯಿಂದ ಬಾಯಲ್ಲಿ ಹುಣ್ಣು ಆದಾಗ ಬಾಯಿಯೊಳಗೆ ತುಪ್ಪವನ್ನು ಸವರಬೇಕು.
  6. ಶರೀರದ ಉಷ್ಣತೆ ಅಥವಾ ನಿದ್ರಾಹೀನತೆಯಿಂದ ಕಣ್ಣುಗಳಲ್ಲಿ ಉರಿ ಇದ್ದಾಗ ತೆಳ್ಳಗಿನ ಬಟ್ಟೆಗೆ ತುಪ್ಪವನ್ನು ಸವರಿ ಕಣ್ಣಿನ ರೆಪ್ಪೆಯ ಮೇಲೆ ಇಡಬೇಕು.
  7. ಶರೀರದಲ್ಲಿ ರೂಕ್ಷತೆಯಿಂದಾಗಿ ಮುಖ ಹಾಗು ಶರೀರದ ಚರ್ಮ ಬಿರಿಯುವಿಕೆ ಹಾಗು ಸುಕ್ಕು ಕಟ್ಟುವುದಿದ್ದರೆ ಶರೀರಕ್ಕೆ ತುಪ್ಪ ಹಚ್ಚಿ 1 ಗಂಟೆ ಬಿಟ್ಟು ಸ್ನಾನ ಮಾಡಬೇಕು.
  8. ಮೈಯಲ್ಲಿ ಕಜ್ಜಿಗಳು (chicken pox /small pox)) ಮೂಡಿದಾಗ ತುಪ್ಪವನ್ನು ಶರೀರಕ್ಕೆ ಹಚ್ಚಿದರೆ ಉರಿ, ನೋವು ಕಡಿಮೆಯಾಗುತ್ತದೆ ಮತ್ತು ಬೇಗನೆ ಅವು ವಾಸಿಯಾಗುತ್ತದೆ.
  9. ಮಧುಮೇಹ ಇರುವ ಜನರಲ್ಲಿ ನರಗಳು ಕ್ಷೀಣವಾಗಿ ಕಾಲುಗಳ ಸಿಡಿತ ಇದ್ದರೆ ತುಪ್ಪವನ್ನು ಹಚ್ಚಿ ಸಾಧಾರಣ 2 ಗಂಟೆಗಳ ಕಾಲ ಬಿಡಬೇಕು.
  10. ಬಿಸಿಲು ಅಥವಾ ಪಿತ್ತದ ಕಾರಣದಿಂದ ತಲೆ ಸುತ್ತುವಿಕೆ ಇದ್ದಾಗ ತುಪ್ಪವನ್ನು ತಲೆಗೆ ಹಾಕಿ ನಂತರ ಸ್ನಾನ ಮಾಡಬೇಕು.
  11. ಮಲಬದ್ಧತೆಯಿಂದಾಗಿ ಗುದದ್ವಾರದಲ್ಲಿ ನೋವು ಕಾಣಿಸಿಕೊಂಡರೆ ಅಲ್ಲಿಗೆ ತುಪ್ಪವನ್ನು ಹಚ್ಚಬೇಕು ಅಥವಾ ದೀಪದ ಬತ್ತಿಗೆ ತುಪ್ಪವನ್ನು ಸವರಿ ಗುದದ್ವಾರದ   ಒಳಗೆ ಇಟ್ಟರೂ ಆದೀತು.
  12. ಅತಿಯಾದ ಜ್ವರದ ಸಂದರ್ಭದಲ್ಲಿ ತುಪ್ಪವನ್ನು ಅಂಗೈ, ಪಾದ ಹಾಗು ಹಣೆಗೆ ಹಚ್ಚಿದರೆ ಜ್ವರ ಬೇಗನೆ ಶಮನವಾಗುತ್ತದೆ.
  13. ಜೇನು ನೊಣ , ಇರುವೆ, ಚೇಳು ಇತ್ಯಾದಿಗಳು ಕಡಿದಾಗ ಕೇವಲ ತುಪ್ಪ ಅಥವಾ ಅರಸಿನ ಹುಡಿಯನ್ನು ಮಿಶ್ರ ಮಾಡಿ ಹಚ್ಚಿದರೆ ಊತ, ಉರಿ ನೋವುಗಳು ಕಡಿಮೆಯಾಗುತ್ತದೆ.
  14. ಎಲ್ಲಿಯಾದರೂ ಬಿದ್ದು ದೇಹದಲ್ಲಿ ರಕ್ತಹೆಪ್ಪುಗಟ್ಟಿದ  ಊತ ಹಾಗು ನೋವು ಇದ್ದರೆ ಆ ಜಾಗಕ್ಕೆ ತುಪ್ಪವನ್ನು ಲೇಪಿಸಬೇಕು
  15. ಕಾಲುಗಳಲ್ಲಿ ರಕ್ತಸಂಚಾರ ಕಡಿಮೆಯಾಗಿ ಅಥವಾ ರಕ್ತನಾಳಗಳ ತಡೆಯಿಂದಾಗಿ ಸಿಡಿತ, ನೋವು, ವೈವರ್ಣ್ಯತೆ ಇದ್ದಾಗ ಕಾಲಿಗೆ ತುಪ್ಪವನ್ನು ಹಚ್ಚಬೇಕು.

ಆಭ್ಯಂತರ ಉಪಯೋಗಗಳು ಮುಂದಿನವಾರ………

ವೈದ್ಯರ ದೂರವಾಣಿ ಸಂಖ್ಯೆ: 9448260242

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Dr. Ravishankar A G

ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಎಂ.ಎಸ್. (ಸ್ನಾತಕೋತ್ತರ) ಪದವೀಧರರಾಗಿರುವ ಡಾ.ರವಿಶಂಕರ ಎ.ಜಿ, ಮೂಡುಬಿದಿರೆ ಆಳ್ವಾಸ್ ಆಯುರ್ವೇದ ಮಹಾವಿದ್ಯಾಲಯ ಸ್ನಾತಕೋತ್ತರ ವಿಭಾಗ ಪ್ರಾಧ್ಯಾಪಕರು. ವಿಟ್ಲದಲ್ಲಿ ಚಿಕಿತ್ಸಾಲಯವನ್ನೂ ಹೊಂದಿದ್ದಾರೆ. ಮೂಲವ್ಯಾಧಿ, ಭಗಂಧರ, ಸೊಂಟನೋವು, ವಾತರೋಗ, ಶಿರಶೂಲ ಇತ್ಯಾದಿಗಳಲ್ಲಿ ಕ್ಷಾರಕರ್ಮ, ಅಗ್ನಿಕರ್ಮ, ರಕ್ತಮೋಕ್ಷಣ ಮೊದಲಾದ ವಿಶೇಷ ಚಿಕಿತ್ಸೆ ನೀಡುವುದರಲ್ಲಿ ಪರಿಣತರು.