ಜಿಲ್ಲಾ ಸುದ್ದಿ

ಅವರು ಮೂವರು, ಬ್ಯಾಗಲ್ಲಿತ್ತು ಇಪ್ಪತ್ತು ಕೆ.ಜಿ. ಗಾಂಜಾ

ಧರ್ಮಸ್ಥಳ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ನಿಂತಿದ್ದ ಹತ್ತಾರು ಮಂದಿಯ ಪೈಕಿಯಲ್ಲಿ ಆ ಮೂವರು ಭಿನ್ನವಾಗಿ ಅತ್ತಿತ್ತ ನೋಡುತ್ತಿದ್ದರು. ನಡವಳಿಕೆ ಅನುಮಾನಾಸ್ಪದವಾಗಿತ್ತು. ತಮಿಳುನಾಡಿನ ನೀಲಗಿರಿ ಜಿಲ್ಲೆಯ ಗುಡಲೂರು ವಾಸಿಗಳಾದ ತಮಿಳ್ ಸೆಲ್ವಿ ಅಲಿಯಾಸ್ ಲಕ್ಷ್ಮಿ, ಶಾಂತಕುಮಾರ್ ಮತ್ತು ಚಂದ್ರಕುಮಾರ್ ಅಲಿಯಾಸ್ ಕುಮಾರ್ ಎಂಬ ಈ ಮೂವರ ಕೈಯಲ್ಲಿದ್ದ ಎರಡು ಬ್ಯಾಗುಗಳಲ್ಲಿದ್ದುದು ಗಾಂಜಾ ಎಂಬ ಅನುಮಾನ ಹಾಗೂ ಖಚಿತ ಮಾಹಿತಿಯನ್ವಯ ಪೊಲೀಸರು ಮಂಗಳವಾರ ಬಸ್ ನಿಲ್ದಾಣದಲ್ಲಿ ಅವರನ್ನು ಸಿಬ್ಬಂದಿಗಳ ಸಹಾಯದಿಂದ ವಶಕ್ಕೆ ತೆಗೆದುಕೊಂಡರು. ಈ ಸಂದರ್ಭ ಪತ್ತೆಯಾದದ್ದು ಇವು.

ಜಾಹೀರಾತು

2 kg ತೂಕದ 10 ಪೊಟ್ಟಣಗಳ ಗಾಂಜಾ, ಮೂರು ಮೊಬೈಲ್, 1100 ರೂ. ನಗದು. ಗಾಂಜಾದ ಮೌಲ್ಯ 4 ಲಕ್ಷ ರೂ.

ಖಚಿತ ವರ್ತಮಾನದಂತೆ ಹಾಗೂ ಮೇಲಧಿಕಾರಿಗಳ ನಿರ್ದೇಶನದಂತೆ ಬಂಟ್ವಾಳ ಡಿವೈಎಸ್ಪಿ ರವೀಶ್ ಸಿ.ಆರ್, ಡಿಸಿಐಬಿ ನಿರೀಕ್ಷಕ ಅಮಾನುಲ್ಲಾ ಮತ್ತು ಸಿಬ್ಬಂದಿ ದಾಳಿಯನ್ನು ನಡೆಸಿ, ತನಿಖೆ ನಡೆಸಿದಾಗ ಆರೋಪಿಗಳು ವಿಜಯವಾಡದಿಂದ ಗಾಂಜಾ ಖರೀದಿಸಿ ನಂತರ ತಮಿಳುನಾಡಿನ ಗುಡಲೂರುವಿನಿಂದ ಕಾರ್ಕಳಕ್ಕೆ ಸಾಗಾಟ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.

ಪಿಎಸ್ಐ ರಾಮಾನಾಯ್ಕ, ಕೊರಗಪ್ಪ, ಸಿಬ್ಬಂಧಿಗಳಾದ ತಾರಾನಾಥ, ಲಕ್ಮಣ್, ಪಳನಿ ವೇಲು, ಉದಯ ರೈ, ಸಂಜೀವ ಪುರುಷ, ಇಕ್ಬಾಲ್, ವಾಸು, ವಿಜಯ ಗೌಡ, ಸೀತಾರಾಮ ಗೌಡ, ಸತ್ಯಪ್ರಕಾಶ, ವಿಶ್ವನಾಥ ನಾಯಕ್ ಮುಂತಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಎಸ್ಪಿ ಭೂಷಣ್ ಬೊರಸೆ ತಂಡವನ್ನು ಶ್ಲಾಘಿಸಿದ್ದು ಬಹುಮಾನವನ್ನೂ ಘೋಷಿಸಿದ್ದಾರೆ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ