ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮೀ ದೇವಸ್ಥಾನದಲ್ಲಿ ಕಲಾತೀರ್ಥ ಪುರಸ್ಕಾರ ಮತ್ತು ರಾಷ್ಟ್ರೀಯ ಮಟ್ಟದ 11 ಪ್ರಶಸ್ತಿ ಪುರಸ್ಕೃತ ಪಂಡಿತ್ ಹೃಷಿಕೇಶ್ ಬಡ್ವೆ ಅವರಿಂದ ಸುರ್ ಸಂಧ್ಯಾ ಕಾರ್ಯಕ್ರಮ ನಡೆಯಲಿದೆ.
ಸಂಜೆ 7.30ರಿಂದ 10ವರೆಗೆ ಕಾರ್ಯಕ್ರಮ ನಡೆಯಲಿದ್ದು ಹಾರ್ಮೋನಿಯಂನಲ್ಲಿ ಚಿನ್ಮಯ್ ಕೋಟ್ಕರ್, ತಬ್ಲಾದಲ್ಲಿ ಮಹೇಶ್ ದೇಸಾಯಿ ಮತ್ತು ಸಿತಾರ್ ನಲ್ಲಿ ಸಮೀಪ್ ಕುಲಕರ್ಣಿ ಭಾಗವಹಿಸುವರು. ಇದರ ಪ್ರಾಯೋಜಕರು ಗೋವರ್ಧನ್ ಕುಡ್ವ, ಪಾಂಡುರಂಗ ಶೆಣೈ, ಮಂಜುನಾಥ ಆಚಾರ್ಯ ಬಂಟ್ವಾಳ, ಯೋಗೀಶ್ ನಾಯಕ್ ಬಿ.ಸಿ.ರೋಡ್, ವೆಂಕಟೇಶ ಪ್ರಭು ಬಿ.ಸಿ.ರೋಡ್ ಮತ್ತು ವಲ್ಲಭೇಷ್ ಶೆಣೈ ಬಿ.ಸಿ.ರೋಡ್ .