ಜಿಲ್ಲಾ ಸುದ್ದಿ

ರೈಲು ಡಿಲೇ: ತಡರಾತ್ರಿವರೆಗೂ ಸ್ಟೇಶನ್ ನಲ್ಲೇ ಕಳೆದ ಪ್ರಯಾಣಿಕರು

www.bantwalnews.com

ಮಂಗಳೂರಿನ ತೋಕೂರಿನಲ್ಲಿ ಹಳಿ ಕೆಲಸ. ಬಂಟ್ವಾಳ, ಪುತ್ತೂರು, ಸುಬ್ರಹ್ಮಣ್ಯ ಸಹಿತ ಮಂಗಳೂರು ಸ್ಟೇಶನ್ ನಲ್ಲೂ ಪ್ರಯಾಣಿಕರ ಪರದಾಟ.

ಇದು ಬೆಂಗಳೂರಿಗೆ ರಾತ್ರಿ ತೆರಳುವ ರೈಲಿಗಾಗಿ ನಿಂತವರ ಗೋಳು.  ಭಾನುವಾರ ರಾತ್ರಿಯಿಡೀ ಇಂಥದ್ದೇ ಅವಸ್ಥೆ.

ಜಾಹೀರಾತು

ಕಣ್ಣೂರಿನಿಂದ ಮಂಗಳೂರಿಗೆ ಬಂದು ಹಾಗೂ ಕಾರವಾರದಿಂದ ಮಂಗಳೂರಿಗೆ ಬಂದು, ಬೆಂಗಳೂರಿಗೆ ತೆರಳುವ ರೈಲಿನ ಸ್ಥಿತಿ ಇದು. ಇಂಥದ್ದಕ್ಕೆ ಏನು ಕಾರಣ ಎಂಬುದಕ್ಕೆ ಖುದ್ದು ಅಧಿಕಾರಿಗಳಿಂದಲೂ ಸಮರ್ಪಕ ಉತ್ತರ ದೊರಕಲಿಲ್ಲ.

ಲಭ್ಯ ಮಾಹಿತಿಯಂತೆ ಕಣ್ಣೂರಿನಿಂದ ಬಂದ ಪ್ರಯಾಣಿಕರು ಮಂಗಳೂರು ರೈಲ್ವೆ ನಿಲ್ದಾಣದಲ್ಲಿ ರಾತ್ರಿ 7ರಿಂದ 12ವರೆಗೆ ರೈಲಿನಲ್ಲೇ ಕಾಲ ಕಳೆಯಬೇಕಾಯಿತು. ಮೊದಲೇ ಸೆಖೆ, ಅದರಲ್ಲೂ ಚಲಿಸದ ರೈಲು. ಪರಿಸ್ಥಿತಿ ಹೇಗಿದ್ದಿರಬಹುದು ಎಂಬುದನ್ನು ನೀವೇ ಊಹಿಸಿ.

ಜಾಹೀರಾತು

ಇದಕ್ಕೆ ಕಾರಣ ಕಾರವಾರದಿಂದ ಬರುವ ಬೋಗಿಗಳು. ಈ ಬೋಗಿಗಳು ಬರುವವರೆಗೆ ಕಣ್ಣೂರಿನಿಂದ ಬರುವ ರೈಲು ಹಾಗೆಯೇ ಮಂಗಳೂರಲ್ಲಿ ಠಿಕಾಣಿ ಹೂಡಬೇಕು.
ವಿವಿಧ ಕಾರ್ಯಕ್ರಮಗಳಿಗೆ ಮಂಗಳೂರಿಗೆ ಆಗಮಿಸಿದ ಮಹಿಳೆಯರು, ಮಕ್ಕಳು, ವೃದ್ಧರ ಸಹಿತ ಪ್ರಯಾಣಿಕರು ರೈಲು ವಿಳಂಬದಿಂದ ತೊಂದರೆ ಅನುಭವಿಸಿದ್ದು, ಸೋಮವಾರ ಬೆಂಗಳೂರಿನಲ್ಲಿ ಕಚೇರಿಗೆ ತೆರಳುವವರೂ ಸಮಸ್ಯೆಗೊಳಗಾದರು.

ಹಾಗೂ ಹೀಗೂ ಕಾರವಾರದಿಂದ ರೈಲು ಬಂತು. ಅದು ಜೋಡಣೆಯಾಗಲು ಮತ್ತೆ ಅರ್ಧ ಗಂಟೆ ತಗಲಿತು. ಡುಗುಡುಗು ಎಂದು ರೈಲು ಹೊರಟು ಬಿ.ಸಿ.ರೋಡಿನಲ್ಲಿರುವ ಬಂಟ್ವಾಳ ರೈಲು ನಿಲ್ದಾಣ ತಲುಪುವಾಗ 1.30 ರಾತ್ರಿಯಾಗಿತ್ತು…!

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ