ಜಿಲ್ಲಾ ಸುದ್ದಿ

ಕರಿಮೆಣಸು ಕೊಯ್ಯಲು ಬಳಸಿದ ಕಬ್ಬಿಣದ ಏಣಿಗೆ ವಿದ್ಯುತ್ ತಗಲಿ ಮೂವರ ಸಾವು

ಕರಿಮೆಣಸು ಕೊಯ್ಯಲು ಹತ್ತಲು ಬಳಸಿದ ಕಬ್ಬಿಣದ ಏಣಿ ವಿದ್ಯುತ್ ವಯರಿಗೆ ತಗಲಿ ವಿದ್ಯುತ್ ಪ್ರವಹಿಸಿ, ಮೂವರು ದಾರುಣವಾಗಿ ಮೃತಪಟ್ಟಿದ್ದಾರೆ.

www.bantwalnews.com report

ಜಾಹೀರಾತು

ಭಾನುವಾರ ಮಂಗಳೂರಿನ ಉಜ್ಜೋಡಿ ಎಂಬಲ್ಲಿ ಈ ಘಟನೆ ನಡೆದಿದೆ.  ವಲೇರಿಯನ್ ಲೋಬೊ (55), ಹಾಸ್ಮೀ ಲೋಬೊ (51) ಮತ್ತು ಸಂದೀಪ್ (28).ಮೃತಪಟ್ಟವರು.

ವಲೇರಿಯನ್ ಲೋಬೊ ಎನ್.ಎಂ.ಪಿ.ಟಿ.ಯಲ್ಲಿ ಎ.ಸಿ. ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದರೆ, ಹಾಸ್ಮೀ ಲೋಬೊ ರೋಷನಿ ನಿಲಯದಲ್ಲಿ ಉದ್ಯೋಗಿ. ಇವರು ಪಕ್ಕದಲ್ಲೇ ಹೋಟೆಲ್ ಒಂದರಲ್ಲಿ ಕೆಲಸ ಮಾಡುವ ಸಂದೀಪ್ ಎಂಬಾತನನ್ನು ಕರಿಮೆಣಸು ಕೊಯ್ಯಲು ಕರೆದಿದ್ದರು. ಮನೆಯ ಆವರಣದಲ್ಲೇ ಇದ್ದ ಕರಿಮೆಣಸು ಬಳ್ಳಿಯಲ್ಲಿದ್ದ ಕಾಳುಮೆಣಸನ್ನು ಕೊಯ್ಯಲು ಕಬ್ಬಿಣದ ಏಣಿಯನ್ನು ಉಪಯೋಗಿಸಿ ಸಂದೀಪ್ ಹತ್ತಿದ. ಆದರೆ ದಿಢೀರನೆ ಏಣಿ ಜಾರಿ ಅಲ್ಲೇ ಹಾದು ಹೋಗುತ್ತಿದ್ದ ಹೈ ಓಲ್ಟೇಜ್ ವಯರಿಗೆ ತಾಗಿತು. ಸಂದೀಪ್ ಅಲ್ಲೇ ಸಾವನ್ನಪ್ಪಿದ. ಇದೇ ಸಂದರ್ಭ ಏಣಿಯನ್ನು ಹಿಡಿದ ವಲೇರಿಯನ್ ಅವರೂ ವಿದ್ಯುತ್ ಆಘಾತಕ್ಕೊಳಗಾದರೆ, ಅವರ ರಕ್ಷಣೇಗೆ ಬಂದ ಹಾಸ್ಮಿ ಅವರೂ ಏಣಿ ಮುಟ್ಟಿ ಮೃತಪಟ್ಟರು.

ಜಾಹೀರಾತು

 

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ