ಬಂಟ್ವಾಳ

ಪರಿಸರ ಪ್ರೀತಿಸಿ, ಬೆಳೆಸಿ: ರಾಜೇಶ್ ನಾಯ್ಕ್ ಉಳಿಪಾಡಿಗುತ್ತು

ಪರಿಸರವು ನಮಗೆ ಏನೆಲ್ಲಾ ಕೊಡುತ್ತದೆಯೋ, ಅದರ ಅರ್ಧದಷ್ಟಾದರೂ ನಾವು ಪರಿಸರದೊಡನೆ ಬೆರೆತು ಬಾಳಬೇಕು.  ಅದನ್ನು ಆಸ್ವಾದಿಸಬೇಕು.  ಇಂದಿನ ಮಕ್ಕಳು ಹೆಚ್ಚಾಗಿ ಔದ್ಯೋಗಿಕ ವಿದ್ಯಾಭ್ಯಾಸದತ್ತ ಮುಖ ಮಾಡುವ ಕಾರಣ, ಕೃಷಿ ಚಟುವಟಿಕೆ, ಮಣ್ಣಿನ ಸೊಗಡು ಅವರು ತಿಳಿಯುತ್ತಿಲ್ಲ.  ಒಬ್ಬ ಕೃಷಿಕ ಪರಿಸರದಲ್ಲಿಯೇ ತನ್ನ ಬದುಕನ್ನು ಕಂಡುಕೊಳ್ಳುತ್ತಾನೆ ಎಂದು ಪ್ರಗತಿಪರ ಕೃಷಿಕ, ಸಮಾಜ ಸೇವಕ ಉಳಿಪಾಡಿಗುತ್ತು ರಾಜೇಶ್ ನಾಯ್ಕ್ ಹೇಳಿದರು.

www.bantwalnews.com report

ಜಾಹೀರಾತು

ಬಂಟ್ವಾಳದ ವಿದ್ಯಾಗಿರಿಯ ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಅವರ ಕೃಷಿ ಕುರಿತ ಚಟುವಟಿಕೆಗಳ ವೀಕ್ಷಣೆಗಾಗಿ ಅವರ ತೋಟಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹೇಳಿದರು.

ವಿದ್ಯಾರ್ಥಿಗಳು ಅಲ್ಲಿನ ನೀರಾವರಿ ವ್ಯವಸ್ಥೆ, ಹೈನುಗಾರಿಕೆ, ವಿದ್ಯುತ್ ಉತ್ಪಾದನಾ ರೀತಿಯನ್ನು ವೀಕ್ಷಿಸಿದರು.  ಶಾಲಾ ಆಡಳಿತ ಮಂಡಳಿ ಸದಸ್ಯ , ಪತ್ರಕರ್ತ ಹರೀಶ್ ಮಾಂಬಾಡಿ ಜೊತೆಗೂಡಿದರು.  ದೈಹಿಕ ಶಿಕ್ಷಕ ಜಗನ್ನಾಥ್ ಅಡಪ, ಶಿಕ್ಷಕಿಯರಾದ ಸುರೇಖಾ ರೈಉಷಾ ಬಿರಮಿತಾ ವಿದ್ಯಾರ್ಥಿಗಳಿಗೆ ಸಹಕರಿಸಿದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ