ಯಕ್ಷಗಾನ

ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿ ನೆನೆದು ಭಾವುಕರಾದ ಸೀತಾರಾಮ ಕುಮಾರ್ ಕಟೀಲ್

ಯಕ್ಷಮಿತ್ರರು ಕೈಕಂಬ ವತಿಯಿಂದ ಬಿ.ಸಿ.ರೋಡಿನಲ್ಲಿ ಸನ್ಮಾನ ಸಮಾರಂಭ, ಯಕ್ಷಗಾನ ಪ್ರದರ್ಶನ

www.bantwalnews.com report

ಸೀತಾರಾಮ ಕುಮಾರ್ ಅವರಿಗೆ ಸನ್ಮಾನ ಕಾರ್ಯಕ್ರಮ pic: Ram naresh Manchi

ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟರು ನನ್ನನ್ನು ಯಕ್ಷಗಾನಕ್ಕೆ ಕರೆತರದಿದ್ದರೆ ನಾನು ಇವನ್ನು ಹೋಟೆಲ್ ನಲ್ಲಿ ಕೆಲಸ ಮಾಡುತ್ತಿರಬೇಕಾಗಿತ್ತು. ಅವರು ನನ್ನ ಸರ್ವಾಂಗೀಣ ಬೆಳವಣಿಗೆಗೆ ಕಾರಣರಾದ ಗುರುಗಳು ಎಂದು ಹಿರಿಯ ಹಾಸ್ಯ ಕಲಾವಿದ ಸೀತಾರಾಮ ಕುಮಾರ್ ಕಟೀಲು ಹೇಳಿದರು.

ಜಾಹೀರಾತು

ಬಿ.ಸಿ.ರೋಡ್ ಕೈಕಂಬ ಯಕ್ಷಮಿತ್ರರು ಆಶ್ರಯದಲ್ಲಿ ಇಲ್ಲಿನ ರಂಗೋಲಿ ಹೋಟೆಲ್ ಹೊರಾಂಗಣದಲ್ಲಿ ಎಡನೀರು ಶ್ರೀ ಗೋಪಾಲಕೃಷ್ಣ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಬಯಲಾಟ ಹಿಡಿಂಬ-ಕೀಚಕ-ಉತ್ತರ ಪ್ರದರ್ಶನ ಸಂದರ್ಭ ನಡೆದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದ ಸಂದರ್ಭ ಭಾವುಕರಾದರು.

ಸುಬ್ರಾಯ ಹೊಳ್ಳ ಅವರ ಕೀಚಕ ಚಿತ್ರ: ರಾಮ್ ನರೇಶ್ ಮಂಚಿ

ಜಾಹೀರಾತು

ಸಿದ್ಧಕಟ್ಟೆ ಅವತ್ತು ನನ್ನನ್ನು ಗುರುತಿಸದಿದ್ದರೆ ನಾನಿಂದು ಎಲ್ಲೋ ಇರುತ್ತಿದ್ದೆ. ಅವರಿಂದು ನಮ್ಮೊಂದಿಗಿಲ್ಲ ಎಂಬುದೇ ದು:ಖದ ಸಂಗತಿ ಎಂದು ಕಂಬನಿ ಮಿಡಿದರು.

ಯಕ್ಷಗಾನದಲ್ಲಿ ನಾನಿಂದು ಗುರುತಿಸಲ್ಪಡಲು ಸಹಕಲಾವಿದರೂ ಕಾರಣ. ಹಾಸ್ಯಗಾರರಾದ ನನಗೆ ಮಾತನಾಡಲು ಅವಕಾಶ ನೀಡಿ ಬೆಳೆಯಲು ಕಾರಣಕರ್ತರಾದರು ಎಂದು ಸೀತಾರಾಮ ಕುಮಾರ್ ಹೇಳಿದರು.

ಶಿವರಾಮ ಜೋಗಿ ಅವರ ಭೀಮ pic: Ram naresh manchi

ಕಸಾಪ ತಾಲೂಕು ಅಧ್ಯಕ್ಷ ಕೆ.ಮೋಹನ ರಾವ್, ಉದ್ಯಮಿ ಸತೀಶ ಭಂಡಾರಿ ಕುಳತಬೆಟ್ಟು, ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ವಿಶ್ವನಾಥ ಶೆಟ್ಟಿ ಸೊರ್ನಾಡು ಉಪಸ್ಥಿತಿಯಲ್ಲಿ ಅವರನ್ನು ಸನ್ಮಾನಿಸಲಾಯಿತು.

ಜಾಹೀರಾತು

ಯಕ್ಷಮಿತ್ರರು ಬಳಗದ ಶಂಕರ ಶೆಟ್ಟಿ, ಭುಜಂಗ ಸಾಲ್ಯಾನ್, ಸದಾಶಿವ ಕೈಕಂಬ, ದಿವಾಕರ ಶೆಟ್ಟಿ ಈ ಸಂದರ್ಭ ಉಪಸ್ಥಿತರಿದ್ದರು. ಕಿಶೋರ್ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.

ಉತ್ತರನಾಗಿ ದಿವಾಕರ ಸಂಪಾಜೆ pic: ram naresh manchi

ಇದೇ ಸಂದರ್ಭ ರವಿಚಂದ್ರ ಕನ್ನಡಿಕಟ್ಟೆ, ಚೈತನ್ಯ ಪದ್ಯಾಣ, ವಿನಯ ಆಚಾರ್ಯ ಕಡಬ ಹಿಮ್ಮೆಳದಲ್ಲಿ ಹಿಡಿಂಬಾ ವಿವಾಹ ಹಾಗೂ ಕೀಚಕ ಪ್ರಸಂಗ ಹಾಗೂ ಪದ್ಯಾಣ ಗಣಪತಿ ಭಟ್, ಶಂಕರನಾರಾಯಣ ಭಟ್ ಮತ್ತು ಜಯರಾಮ ಭಟ್ ಹಿಮ್ಮೇಳದಲ್ಲಿ ಉತ್ತರನ ಪೌರುಷ ಪ್ರಸಂಗ ಪ್ರದರ್ಶನ ಸೇರಿದ ನೂರಾರು ಪ್ರೇಕ್ಷಕರ ಸಮ್ಮುಖ ಕಂಡಿತು.

ಜಾಹೀರಾತು

Pic Courtesy: Ram Naresh Manchi

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ