ವಿಟ್ಲ

ತಿರುವಿನಲ್ಲಿ ತಪ್ಪಿದ ನಿಯಂತ್ರಣಕ್ಕೆ ಎರಡು ಜೀವಗಳ ಬಲಿ

ವಿಟ್ಲ ಸಮೀಪದ ಉಕ್ಕುಡ ಸಮೀಪ ತೆರಳುವ ಮಾರ್ಗದಲ್ಲಿ ಸುಮಾರು 30 ಡಿಗ್ರಿ ತಿರುವೊಂದಿದೆ.

www.bantwalnews.com

ಜಾಹೀರಾತು

ಕಡಂಬು ಬದಿಯಾರು ನಿವಾಸಿಗಳಿದ್ದ ಆಲ್ಟೋ ಕಾರು ಅದೇ ಜಾಗದಲ್ಲಿ ವೇಗವಾಗಿ ಉಕ್ಕುಡದೆಡೆಗೆ ತೆರಳುತ್ತಿದ್ದ ಸಂದರ್ಭ, ಅಚಾನಕ್ ಆಗಿ ಚಾಲಕನ ನಿಯಂತ್ರಣ ತಪ್ಪಿತು. 50 ಮೀಟರ್ ದೂರದ ಬಲಬದಿಯಲ್ಲಿ ರಸ್ತೆ ಪಕ್ಕ ಮಣ್ಣಿನ ದಿಬ್ಬವೊಂದಿದೆ. ಹಾಗೂ ಅಲ್ಲೇ ಕಂಪೌಂಡ್ ಒಂದಿದೆ. ಕಾರು ಅಲ್ಲಿಗೆ ವೇಗವಾಗಿ ಬಂದು ಬಡಿಯಿತು. ಪರಿಣಾಮ, ಎರಡು ಜೀವಗಳು ಬಲಿಯಾದವು.

ಇದು ಉಕ್ಕುಡ ಅರಣ್ಯ ಇಲಾಖೆ ಚೆಕ್ ಪೋಸ್ಟ್ ಸಮೀಪದ ವಸತಿ ನಿಲಯದ ಮುಂಭಾಗ ಸೋಮವಾರ ನಡೆದ ಅಪಘಾತ.

ಕಡಂಬು ಬದಿಯಾರು ನಿವಾಸಿಗಳಾದ ಸುಲೈಮಾನ್ (60), ಶಹಜಾನ್ (3 ತಿಂಗಳು) ಮೃತಪಟ್ಟರು. ಸೆಲ್ಮಾ (45), ಮಹಮ್ಮದ್ (23), ಝೊಹರಾ(29), ನಿಹಾ (7), ಸೈಫಾ (3ತಿಂಗಳು) ನಸೀರಾ(22), ಬಿಪಾತುಮ್ಮ(35) ಗಾಯಗೊಂಡರು. ವಿಟ್ಲ, ಪುತ್ತೂರು ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವಿವಿಧ ಖಾಸಗೀ ಆಸ್ಪತ್ರೆಗಳಿಗೆ ವರ್ಗಾವಣೆ ಮಾಡಲಾಯಿತು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ