ಜಿಲ್ಲಾ ಸುದ್ದಿ

ಬೆಂಕಿ ಹೊತ್ತಿದ ಕಾರಿನಲ್ಲಿದ್ದ ಶಬರಿಮಲೆ ಯಾತ್ರಿಗಳ ರಕ್ಷಿಸಿದ ಸಚಿವ ಖಾದರ್

ಶಬರಿಮಲೆ ಯಾತ್ರೆ ಮುಗಿಸಿ ಧರ್ಮಸ್ಥಳಕ್ಕೆ ತೆರಳಿ ಹುಬ್ಬಳ್ಳಿಗೆ ಮರಳುತ್ತಿದ್ದ ಕಾರೊಂದರ ಯಾತ್ರಿಗಳನ್ನು ರಕ್ಷಿಸುವ ಮೂಲಕ ಸಚಿವ ಯು.ಟಿ.ಖಾದರ್ ಮಾನವೀಯತೆ ಮೆರೆದರು.

https://bantwalnews.com

ಮಂಗಳೂರಿನ ಪಂಪುವೆಲ್-ನಂತೂರು ಸರ್ಕಲ್ ಮಧ್ಯೆ ರಸ್ತೆಯಲ್ಲೇ ಶುಕ್ರವಾರ ಈ ಕಾರು ಆಕಸ್ಮಿಕ ಬೆಂಕಿ ಹಿಡಿದು ಹೊತ್ತಿ ಉರಿಯುತ್ತಿತ್ತು. ಕಾರಿನಲ್ಲಿ ಚಾಲಕ ಸೇರಿ ಐವರು ಇದ್ದರು.

ಜಾಹೀರಾತು

ಇದೇ ಸಂದರ್ಭ ಮುಂಬೈಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಆಹಾರ ಸಚಿವರಾದ ಯು.ಟಿ.ಖಾದರ್ ಅದೇ ರಸ್ತೆಯಾಗಿ ಬೋಳಿಯಾರ್ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು. ಶಬರಿಮಲೆ ಭಕ್ತರ ಇಂಡಿಕಾ ಕಾರು ಉರಿಯುವುದನ್ನು ಕಂಡ ಸಚಿವರು ತಕ್ಷಣ ಸ್ಥಳಕ್ಕೆ ತೆರಳಿ. ಅಗ್ನಿಶಾಮಕದಳಕ್ಕೆ ಫೋನಾಯಿಸಿದರು. ಬಳಿಕ ಕಾರಿನೊಳಗಿದ್ದ ಹುಬ್ಬಳ್ಳಿಯ ಶಬರಿಮಲೆ ಭಕ್ತರನ್ನು ಹೊರಗೆಳೆದು ಕಾರಿಗೆ ನೀರು ಸುರಿದು ಬೆಂಕಿ ನಂದಿಸುವಲ್ಲಿ ಸಫಲರಾದರು. ಕಾರು ಭಾಗಶಃ ಭಸ್ಮವಾಗಿದೆ. ಸಚಿವರು ಇಲ್ಲದೇ ಇರುತ್ತಿದ್ದರೆ ಕಾರೊಳಗಿದ್ದವರ ಜೀವಕ್ಕೆ ಅಪಾಯವಾಗುವುದಲ್ಲದೆ ಕಾರು ಸಂಪೂರ್ಣ ಉರಿಯುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಎಲ್ಲವೂ ನಂದಿದ ಬಳಿಕ ಅಗ್ನಿಶಾಮಕದಳದ ವಾಹನ ಬಂತು..

ಈ ಸಂದರ್ಭ ಸಚಿವ ಯು.ಟಿ.ಖಾದರ್ ಅವರಿಗೆ ದೀಪಕ್ ಪಿಲಾರ್, ಸುರೇಶ್ ಶಕ್ತಿ, ಜೋಸೆಫ್, ಪಿಯುಸ್, ಎನ್ನೆಸ್ ಕರೀಂ, ಸಿರಾಜ್ ಕಿನ್ಯ, ರಫೀಕ್ ಅಂಬ್ಲಮೊಗರು, ಸಚಿವರ ಆಪ್ತ ಸಹಾಯಕ ಲಿಬ್ಝತ್ ನೆರವಾಗುವ ಮೂಲಕ ಹೆಚ್ಚಿನ ಅಪಾಯವನ್ನು ತಪ್ಪಿಸಿದರು. ಕಾರಲ್ಲಿದ್ದ ಶಬರಿಮಲೆ ಭಕ್ತರಿಗೆ ರಾತ್ರಿಯ ಊಟದ ವ್ಯವಸ್ಥೆ ಮಾಡಿ ಊರಿಗೆ ತೆರಳಲು ಬಸ್ ಟಿಕೆಟ್ ತೆಗೆದುಕೊಟ್ಟರು ಎಂದು  www.bantwalnews.com ಗೆ ರಶೀದ್ ವಿಟ್ಲ ಮಾಹಿತಿ ನೀಡಿದ್ದಾರೆ

ಜಾಹೀರಾತು

 

 

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ