ನೀರಿನ ಪೈಪ್ ಒಡೆದ ಪರಿಣಾಮ, ಪಾಣೆಮಂಗಳೂರು ವೀರವಿಠಲ ದೇವಸ್ಥಾನದ ಎದುರಿನ ನಡು ರಸ್ತೆಯಲ್ಲಿ ಬೃಹತ್ ಗುಂಡಿಯೊಂದು ನಿರ್ಮಾಣವಾಗಿದೆ.
ಈ ರಸ್ತೆಯ ಅಡಿ ಭಾಗದಲ್ಲಿ ಹಾದು ಹೋಗಿರುವ ಬಂಟ್ವಾಳ ಪುರಸಭೆಗೆ ಸೇರಿದ ನೀರಿನ ಪೈಪ್ ಮಂಗಳವಾರ ಒಡೆದು ನೀರು ಸೋರಿಕೆಯಾಗಿದ್ದು ನೀರು ರಭಸದಿಂದ ಹರಿದು ರಸ್ತೆ ಅಡಿ ಭಾಗದ ಮಣ್ಣು ಕರಗಿದ್ದರಿಂದ ಬೆಳಗ್ಗಿನ ಜಾವ ವಾಹನ ಸಂಚರಿಸುವಾಗ ಈ ಹೊಂಡ ನಿರ್ಮಾಣವಾಗಿದೆ ಎಂದು ಸ್ಥಳೀಯರು ತಿಳಿಸಿದರು.
ಸ್ಥಳೀಯರು ಹೊಂಡದ ಸುತ್ತಲೂ ಊರಿನ ಜನರೇ ಕಲ್ಲುಗಳನ್ನು ಇಟ್ಟಿದ್ದಾರೆ. ಆದರೂ ವೇಗವಾಗಿ ಸಂಚಾರಿಸುವ ವಾಹನಗಳು ಅಪಘಾತಕ್ಕೀಡಾಗುತ್ತಿದ್ದು, ಕೂಡಲೇ ಪುರಸಭಾ ಅಧಿಕಾರಿಗಳು ಹೊಂಡವನ್ನು ಮುಚ್ಚಲು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಸಿಸಿ ಕ್ಯಾಮರಾ ಅಳವಡಿಸಿ, ಅಪರಿಚಿತರಿಗೆ ಬಾಗಿಲು ತೆಗೆಯಬೇಡಿ – ಪೊಲೀಸರ ಸಲಹೆ (more…)