ನಾಟಕ

ಪಿಲಿತ ಪಂಜ’ ತುಳು ನಾಟಕ ಕೃತಿ ಲೋಕಾರ್ಪಣೆ

ನ್ಯಾಯವಾದಿ, ಯುವ ನಾಟಕಕಾರ ಶಶಿರಾಜ್ ರಾವ್ ಕಾವೂರ್ ರವರ ಹೊಸ ತುಳು ನಾಟಕ ‘ಪಿಲಿತ ಪಂಜ’ವನ್ನು ಹಿರಿಯ ಸಾಹಿತಿ, ಜಾನಪದ ವಿಧ್ವಾಂಸ  ಶ್ರೀ ಅಮೃತ ಸೋಮೇಶ್ವರ ರವರು ವಿಭಿನ್ನ ರೀತಿಯಲ್ಲಿ ಬಿಡುಗಡೆಗೊಳಿಸಿದರು.

ಸಾಹಿತಿ ಅಮೃತ ಸೋಮೇಶ್ವರರ ನಿವಾಸ, ಕೋಟೆಕಾರಿನ ‘ಒಲುಮೆ’ ಯ ಅತ್ಮೀಯ ವಾತಾವರಣದಲ್ಲಿ ಸರಳವಾಗಿ ನಡೆದ ಸಮಾರಂಭದಲ್ಲಿ ಅವರು ಕೃತಿಯನ್ನು ಲೋಕಾರ್ಪಣೆ ಮಾಡಿದರು.

ಜಾಹೀರಾತು

‘ತುಳುವಿನಲ್ಲಿ ಆಧುನಿಕ ಶೈಲಿಯ ಚಾರಿತ್ರಿಕ ನಾಟಕಗಳು ವಿರಳವಾಗಿದ್ದು, ಈ  ನಿಟ್ಟಿನಲ್ಲಿ ಪಿಲಿತ ಪಂಜ ಒಳ್ಳೆಯ ಕೊಡುಗೆಯಾಗಿದೆ. ಶಿವಾಜಿಯ ವ್ಯಾಘ್ರ ನಖದ ಕತೆ ಜನಜನಿತವಾದದ್ದು. ಅದನ್ನು ನಾಟಕ ರೂಪದಲ್ಲಿ ನೀಡಿದ್ದು ಶಶಿರಾಜ್ ಕಾವೂರರ ಸೃಜನಶೀಲತೆಗೆ ಸಾಕ್ಷಿ. ಅವರಿಂದ ಇನ್ನಷ್ಟು ಒಳ್ಳೆಯ ಕೃತಿಗಳು ಮೂಡಿಬರಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಡಾ.ನಾ.ದಾಮೋದರ ಶೆಟ್ಟಿ, ಹಿರಿಯ ರಂಗಕರ್ಮಿ ಯು.ಮೋಹನಚಂದ್ರ (ಮೋಚ), ರಂಗ ದಶಾವತಾರಿ ಜೀವನರಾಂ ಸುಳ್ಯ, ಅರೆಹೊಳೆ ಪ್ರತಿಷ್ಠಾನದ ಅರೆಹೊಳೆ ಸದಾಶಿವ ರಾವ್, ರಂಗಸಂಗಾತಿಯ ಮೈಮ್ ರಾಮ್ ದಾಸ್ ಮೊದಲಾದವರು ಉಪಸ್ಥಿತರಿದ್ದರು

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ