www.bantwalnews.com ವರದಿ
ಬಂಟ್ವಾಳ ಎಸ್ವಿಎಸ್ ದೇವಳ ಕಿ.ಪ್ರಾ. ಶಾಲೆಯ ವರ್ಧಂತ್ಯುತ್ಸವ ಕಾರ್ಯಕ್ರಮ ನಡೆಯಿತು. ಹಿರಿಯ ಪತ್ರಕರ್ತ ರಾಜಾ ಬಂಟ್ವಾಳ ಅಧ್ಯಕ್ಷತೆ ವಹಿಸಿದ್ದರು.
ಪುತ್ತೂರು ವಲಯ ಅಬಕಾರಿ ನಿರೀಕ್ಷಕ ಎಂ. ಸುಬ್ರಹ್ಮಣ್ಯ ಪೈ ಸ್ವಸ್ತಿವಾಚನ ಮಾಡಿದರು. ಶಾಲಾ ಮುಖ್ಯಶಿಕ್ಷಕಿ ಚಂದ್ರಕಲಾ ವಾರ್ಷಿಕ ವರದಿ ವಾಚಿಸಿದರು.
ಶಿಕ್ಷಕ ಶಿವಾನಂದ ಬಾಳಿಗ ಗಣೇಶೋತ್ಸವ ಸಮಿತಿ ವರದಿ ನೀಡಿದರು.
ಶಾಲಾಡಳಿತ ಸಮಿತಿ ಸದಸ್ಯ ಪ್ರವೀಣ್ ಕಿಣಿ , ಪ್ರಭಾಕರ ಪೈ, ಪುರಸಭಾ ಸದಸ್ಯ ಜಗದೀಶ ಕುಂದರ್, ಹಿ.ಪ್ರಾ. ಶಾಲಾ ಮುಖ್ಯಶಿಕ್ಷಕಿ ಶಾಂತಾ ಬಾ ಉಪಸ್ಥಿತರಿದ್ದರು.
ಜೊತೆ ಕಾರ್ಯದರ್ಶಿ ಮಲ್ಲಿಕಾ ಕುಮಾರಿ, ಶಾಲಾ ನಾಯಕ ಹರ್ಷಿತ್, ಶಾಲಾ ನಾಯಕಿ ಅಕ್ಷತಾ ಪಾಲ್ಗೊಂಡಿದ್ದರು.
ಕಾರ್ಯದರ್ಶಿ ಚಂದ್ರಮ್ಮ ಪ್ರಸ್ತಾವನೆ ಸಲ್ಲಿಸಿದರು. ಕೋಶಾಧಿಕಾರಿ ಪರಮೇಶ್ವರ ಎಂ., ಮಲ್ಲಿಕಾ ಕಾರ್ಯಕ್ರಮ ನಿರ್ವಹಿಸಿದರು.