ಬಂಟ್ವಾಳ: ಕೆಎಸ್ ಆರ್ ಟಿಸಿ ಬಸ್ ಮತ್ತು ಕಾರು ನಡುವೆ ನಡೆದ ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದಾರೆ.
ಮಂಗಳವಾರ ರಾತ್ರಿ ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ನಾವೂರು ಗ್ರಾಮದ ಪೊಯಿಲೊಡಿ ಎಂಬಲ್ಲಿ ಈ ಘಟನೆ ನಡೆದಿದ್ದು,
ತೀವ್ರ ಗಾಯಗೊಂಡ ಬೆಳ್ತಂಗಡಿ ತಾಲೂಕು ಗುರುವಾಯನಕೆರೆಯ ತಿರುಮಲೇಶ್ವರ ಹಾಗೂ ರಾಘವೇಂದ್ರ ಎಂಬವರುಗಳನ್ನು ದ.ಕ ಜಿಲ್ಲಾಹೆಚ್ಚುವರಿ ಪೊಲೀಸು ಅಧೀಕ್ಷಕರು ತಮ್ಮ ವಾಹನದಲ್ಲೇ ಚಾಲಕ ಸತೀಶ್ ಹಾಗೂ ಗನ್ ಮ್ಯಾನ್ ಚಂದ್ರಶೇಖರ ರವರ ಸಹಾಯ ದಿಂದ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆತಂದು ಆಸ್ಪತ್ರೆಗೆ ದಾಖಲಿಸುವಲ್ಲಿ ನೆರವಾದರು.