ವೀರಕಂಭದಲ್ಲಿ ಅಂತರಜಿಲ್ಲಾ ಕಬಡ್ಡಿ ಪಂದ್ಯಾಟ

ಬಂಟ್ವಾಳ: ಹಳ್ಳಿಯ ಆಟವೆಂದೇ ಖ್ಯಾತಿಯಾದ ಕಬಡ್ಡಿಯು ಇಂದು ವಿಶ್ವ ಮಾನ್ಯತೆಯನ್ನು ಪಡೆದಿರುವುದು ಸಂತಸದಾಯಕವಾಗಿದೆ ಎಂದು ಮುಳಿಹಿತ್ಲು ಸೀತಾರಾಮ್ ಹೇಳಿದರು.

23-kabaddi-inauguration

ಸ್ವಸ್ತಿಕ್ ಫ್ರೆಂಡ್ಸ್ ಗಣೇಶ್ ಕೋಡಿ ವೀರಕಂಭ ದಶಮಾನೋತ್ಸವದ ಸವಿನೆನಪಿಗಾಗಿ ಆಯೋಜಿಸಿದ ಅಂತರ್ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಾಹೀರಾತು

ಹಿರಿಯರಾದ ಜಿ.ಶ್ಯಾಂಭಟ್ ತೋಟ ವೀರಕಂಭ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಂಬಳ ಮಾಜಿ ತೀರ್ಪುಗಾರ ಬಿ.ಶೀನ ಶೆಟ್ಟಿ ಬರೆ ವೀರಕಂಭ ಕಬಡ್ಡಿ ಶ್ರೇಷ್ಠ ಆಟವಾಗಿದೆ. ಇಂದು ಅದರ ಪ್ರಚಾರದಿಂದ ಮನೆಗಳಲ್ಲಿ ವೀಕ್ಷಿಸುತ್ತಿದ್ದ ಧಾರವಾಹಿಯು ನಿಂತು ಹೋಗುವಷ್ಥು ಬದಲಾವಣೆಯ ಗಾಳಿ ಬೀಸಿದೆ ಎಂದರು.

ಧಾರ್ಮಿಕ ಮತ್ತು ಸಾಮಾಜಿಕ ಪ್ರೋತ್ಸಾಹಕ ಸುಂದರ ಆಳ್ವ ಗೋಳ್ತಮಜಲುಗುತ್ತು, ಕರಾಟೆ ಅಸೋಸಿಯೇಶನ್ ಆಫ್ ಇಂಡಿಯಾದ ತೀರ್ಪುಗಾರರು ಹಾಗೂ ತರಬೇತು ದಾರರಾದ ಧರ್ಣಪ್ಪ ಕೆ. ಖಂಡಿಗ ಕೇಪು ವಿಟ್ಲ, ಹಿರಿಯ ನಾಗರಿಕರಾದ ಚಂದ್ರಯ್ಯ ಆಚಾರ್ಯ ಗಣೇಶ್ ಕೋಡಿ ವೀರಕಂಭ ಅತಿಥಿಗಳಾಗಿ ಭಾಗವಹಿಸಿದ್ದರು.

ಆನಂದ, ಸುಂದರ ಆಳ್ವ, ಹಾಗೂ ಗಂಗಯ್ಯ ನಾಯ್ಕ್‌ರವರನ್ನು ಸನ್ಮಾನಿಸಾಯಿತು.

ಪ್ರಗತಿಪರ ಕೃಷಿಕ ರಾಜೇಶ್ ನಾಯ್ಕ್ ಉಳ್ಳಿಪ್ಪಾಡಿಗುತ್ತು, ಮಾಧವ ಮಾವೆ, ಮಹಾಬಲ ಆಳ್ವ, ಸ್ಥಳೀಯ ಗ್ರಾ.ಪಂ. ಸದಸ್ಯರು ಉಪಸ್ಥಿತರಿದ್ದರು.

ಸಂದೀಪ್ ಗಣೇಶ್ ಕೋಡಿ ಸ್ವಾಗತಿಸಿ, ರವೀಶ್ ಆಚಾರ್ಯ ಧನ್ಯವಾದ ನೀಡಿದರು, ರಾಜೇಶ್ ಕೊಟ್ಟಾರಿ ಕೊಳಕೀರ್‌ ಕಾರ್ಯಕ್ರಮ ನಿರೂಪಿಸಿದರು.

ಸಮಾರೋಪದಲ್ಲಿ .ತಾ.ಪಂ ಸದಸ್ಯರಾದ ಮಹಾಬಲ ಆಳ್ವ ಗೋಳ್ತಮಜಲು ಗುತ್ತು, ವೀರಕಂಭ ಗ್ರಾ.ಪಂ. ಸದಸ್ಯರಾದ ಜಯಂತಿ ಜನಾರ್ಧನ, ಮತ್ತು ರಾಮಚಂದ್ರ ಪ್ರಭು, ಪ್ರೇಮ ಜಯಕರ ಆಚಾರ್ಯ, ಶೀನ ಶೆಟ್ಟಿ ಬರೆ, ಹಾಗೂ ಮಹಾಬಲ ಆಳ್ವ ಭಾಗವಹಿಸಿದ್ದರು.

ವಿಜೇತರಾಗಿ ಮಾತೃಶ್ರೀ ಗೆಳೆಯರ ಬಳಗ ವೀರಕಂಭ ಪ್ರಥಮ, ಶ್ರೀ ಚಕ್ರ ವಾಮದಪದವು ದ್ವಿತೀಯ, ಅಮ್ಮ ಫ್ರೆಂಡ್ಸ್ ಗೋಳ್ತಮಜಲು ’ಬಿ’ ತಂಡ ತೃತಿಯ ಹಾಗೂ ’ಎ’ ತಂಡ ಚತುರ್ಥ ಬಹುಮಾನವನ್ನು ಪಡೆದುಕೊಂಡರು. ಹಾಗೂ ಶಿಸ್ತಿನ ತಂಡ, ಉತ್ತಮ ದಾಳಿಗಾರ, ಉತ್ತಮ ಹಿಡಿತಗಾರ ಮತ್ತು ಸವ್ಯಸಾಚಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.ವಿಘ್ನೇಶ್‌ ಸ್ವಾಗತಿಸಿ, ರವೀಶ್‌ ವಂದಿಸಿದರು.

ಜಾಹೀರಾತು

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ವೀರಕಂಭದಲ್ಲಿ ಅಂತರಜಿಲ್ಲಾ ಕಬಡ್ಡಿ ಪಂದ್ಯಾಟ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*