ಎಪಿಎಂಸಿ ಫೈಟ್: 29 ನಾಮಪತ್ರ ಸಲ್ಲಿಕೆ

ಬಂಟ್ವಾಳ: ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ 12ಸ್ಥಾನಗಳಿಗೆ  29  ನಾಮಪತ್ರ ಸಲ್ಲಿಕೆಯಾಗಿದೆ. ಸೋಮವಾರ ನಾಮತ್ರ ಸಲ್ಲಿಕೆಗೆ ಕೊನೆ ದಿನವಾಗಿತ್ತು.

%e0%b2%8f%e0%b2%aa%e0%b2%bf%e0%b2%8e%e0%b2%82%e0%b2%b8%e0%b2%bf

ಮಾಣಿ ಕ್ಷೇತ್ರಕ್ಕೆ 4 ನಾಮಪತ್ರ ಸಲ್ಲಿಕೆಯಾಗಿದ್ದರೆ, ಪಾಣೆಮಂಗಳೂರು, ತುಂಬೆ, ಚನ್ನ್ಯೆತ್ತೋಡಿ ಕ್ಷೇತ್ರಕ್ಕೆ ತಲಾ 3 ರಂತೆ ನಾಮಪತ್ರ ಸಲ್ಲಿಕೆಯಾಗಿದೆ. ಉಳಿದಂತೆ ಎಲ್ಲಾ ಕ್ಷೇತ್ರಗಳಿಗೂ ತಲಾ 2ರಂತೆ ನಾಮಪತ್ರ ಸಲ್ಲಿಕೆಯಾಗಿದೆ. ನಿರೀಕ್ಷೆಯಂತೆ ಇಲ್ಲಿ ಬಿಜೆಪಿ,ಕಾಂಗ್ರಸ್ ಬೆಂಬಲಿತ ಅಭ್ಯರ್ಥಿಗಳು ಮಾತ್ರ ಕಣದಲ್ಲಿದ್ದಾರೆ.

ಜಾಹೀರಾತು

15ರಂದು ಪರಿಶೀಲನೆ. 18ರಂದು ವಾಪಸ್ ಪಡೆಯಲು ಕೊನೇ ದಿನ. ಡಿ.4ರಂದು ಬೆಳಗ್ಗೆ 8ರಿಂದ 4ವರೆಗೆ ಮತದಾನ. ಡಿ.6ರಂದು ಮತ ಎಣಿಕೆ.

ಒಟ್ಟು 12 ಸದಸ್ಯ ಬಲದ ಎಪಿಎಂಸಿಯಲ್ಲಿ ಕಳೆದ ಬಾರಿ ಬಿಜೆಪಿ 8, ಕಾಂಗ್ರೆಸ್ 4 ಸದಸ್ಯರನ್ನು ಹೊಂದಿತ್ತು.

ಈ ಚುನಾವಣೆ ಗ್ರಾ.ಪಂ.ಚುನಾವಣೆ ಮಾದರಿಯಲ್ಲಿ ಪಕ್ಷದ  ಚಿಹ್ನೆಯಡಿ ನಡೆಯುತ್ತಿಲ್ಲವಾದರೂ,ವಿವಿಧ ಪಕ್ಷದ  ಮುಖಂಡರು ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದರಿಂದ ಹಿಡಿದು ಪ್ರಚಾರದಲ್ಲೂ ಮುಂಚೂಣಿಯಲ್ಲಿರುತ್ತಾರೆ. ನೋಂದಾಯಿತ ಕೃಷಿಕರು, ವರ್ತಕರು ಮತದಾರರು.

ಕ್ಷೇತ್ರಗಳು ಹೀಗಿವೆ.

  1. ಸಂಗಬೆಟ್ಟು (ಸಾಮಾನ್ಯ, ಮತದಾರರು-3997),
  2. ಚನ್ನೈತೋಡಿ (ಸಾಮಾನ್ಯ ಮಹಿಳೆ, ಮತದಾರರು-3903),
  3. ಅಮ್ಟಾಡಿ (ಹಿ.ವ.ಅ, ಮತದಾರರು-4715),
  4. ಕಾವಳಮೂಡೂರು (ಸಾಮಾನ್ಯ, ಮತದಾರರು-4346),
  5. ಕೊಳ್ನಾಡು (ಹಿ.ವ.ಬಿ.,ಮತದಾರರು-3890),
  6. ಅಳಕೆ(ಹಿ.ವ.ಬಿ.ಮಹಿಳೆ, ಮತದಾರರು-4054),
  7. ಕೆದಿಲ(ಅನುಸೂಚಿತ ಪಂಗಡ, ಮತದಾರರು-3946),
  8. ಮಾಣಿ(ಸಾಮಾನ್ಯ, ಮತದಾರರು-4768),
  9. ಕಡೇಶ್ವಾಲ್ಯ (ಸಾಮಾನ್ಯ , ಮತದಾರರು-3772),
  10. ಪಾಣೆಮಂಗಳೂರು (ಸಾಮಾನ್ಯ , ಮತದಾರರು-4004),
  11. ತುಂಬೆ (ಅನುಸೂಚಿತ ಜಾತಿ,ಮತದಾರರು-4402),
  12. ವರ್ತಕರ ಕ್ಷೇತ್ರ (ಮತದಾರರು-204)

ಒಟ್ಟು 46001 ಮಂದಿ ತಮ್ಮಹಕ್ಕು ಚಲಾಯಿಸಲು ಅರ್ಹತೆ ಹೊಂದಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ತವರು ಕ್ಷೇತ್ರವಾಗಿರುವುದರಿಂದ ಕಾಂಗ್ರೆಸ್ಸಿಗೆ ಈ ಚುನಾವಣೆ ಪ್ರತಿಷ್ಠೆ ಪ್ರಶ್ನೆಯಾದರೆ, ಬಿಜೆಪಿ ಈ ಬಾರಿಯೂ ಅಧಿಕಾರವನ್ನು ತಮ್ಮಲ್ಲೇ ಉಳಿಸಿಕೂಳ್ಳುವ ನಿಟ್ಟಿನಲ್ಲಿ ಪ್ರತಿಷ್ಠೆಯನ್ನಾಗಿಸಿದೆ.

ಬಿಜೆಪಿ ಈಗಾಗಲೇ ಪಟ್ಟಿ ಬಿಡುಗಡೆ ಮಾಡಿದೆ. ವಿವರ ಹೀಗಿದೆ.

ಸಂಗಬೆಟ್ಟು (ಸಾಮಾನ್ಯ) ವಸಂತ ಅಣ್ಣಳಿಕೆ
ಚೆನ್ನೈತೋಡಿ (ಮಹಿಳೆ) ಮಲ್ಲಿಕಾ ಶೆಟ್ಟಿ
ಅಮ್ಟಾಡಿ (ಹಿಂ.ವ.ಎ.) ರಮೇಶ್ ಪೂಜಾರಿ ಬಟ್ಟಾಜೆ
ಕಾವಳಮೂಡೂರು (ಸಾಮಾನ್ಯ) ಕೆ.ಹರಿಶ್ಚಂದ್ರ ಪೂಜಾರಿ
ಕೊಳ್ನಾಡು (ಹಿಂ.ವ.ಬಿ) ಯೋಗೀಶ್ ಆಳ್ವ
ಅಳಿಕೆ (ಮಹಿಳೆ) ಗೀತಾ .ಟಿ.ಶೆಟ್ಟಿ
ಕೆದಿಲ (ಅನುಸೂಚಿತ ಪಂಗಡ) ಜಗದೀಶ್
ಮಾಣಿ (ಸಾಮಾನ್ಯ) ನೇಮಿರಾಜ್ ರೈ
ಕಡೇಶ್ವಾಲ್ಯ (ಸಾಮಾನ್ಯ) ಆರ್.ಚೆನ್ನಪ್ಪ ಕೋಟ್ಯಾನ್
ಪಾಣೆಮಂಗಳೂರು (ಸಾಮಾನ್ಯ) ಅರವಿಂದ ಭಟ್
ತುಂಬೆ (ಅನುಸೂಚಿತ ಜಾತಿ) ವಿಟ್ಠಲ ಸಾಲಿಯಾನ್
ವರ್ತಕರ ಕ್ಷೇತ್ರ : ಬಾಲಕೃಷ್ಣ ಆಳ್ವ

 

 

ಜಾಹೀರಾತು

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ಎಪಿಎಂಸಿ ಫೈಟ್: 29 ನಾಮಪತ್ರ ಸಲ್ಲಿಕೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*