ವಿಶೇಷ ವರದಿ

ಅಪಾಯ…ನೀವೀಗ ಕಲ್ಲಡ್ಕ – ಕಾಂಞಂಗಾಡು ಹೆದ್ದಾರಿಯಲ್ಲಿದ್ದೀರಿ!

ವಿಟ್ಲ: ಅಪಾಯ…ನೀವೀಗ ಕಲ್ಲಡ್ಕ – ಕಾಂಞಂಗಾಡು ಹೆದ್ದಾರಿಯಲ್ಲಿದ್ದೀರಿ!

ಶೀರ್ಷಿಕೆ ನೋಡಿ ಹುಬ್ಬೇರಿಸಬೇಡಿ. ಈ ಮಾರ್ಗ ನೋಡಲು ಅಂದವಾಗಿದ್ದರೂ ಅಷ್ಟೇ ಅಪಾಯಕಾರಿ.

ಜಾಹೀರಾತು

ರಸ್ತೆ ಬದಿಯಲ್ಲಿ ಡಾಂಬರಿನಿಂದ ಕೆಳಗಿಳಿಸಿದರೆ ಅಪಾಯ, ರಸ್ತೆ ಬದಿ ತಡೆಗೋಡೆ ಇಲ್ಲದೆ ಅಪಾಯ, ಮಳೆಗಾಲ ಬಂದಾಗ ಮಣ್ಣು ಸಡಿಲವಾಗಿ ಕುಸಿತಕ್ಕೊಳಗಾದರೆ ಅಪಾಯ, ಚರಂಡಿಗಳಲ್ಲಿ ಮಣ್ಣು ತುಂಬಿದರೆ ಅಪಾಯ…. ಹೀಗೆ ಅಪಾಯಗಳ ಸರಮಾಲೆಯನ್ನೇ ನೋಡಬೇಕಾದರೆ ಈ ರಸ್ತೆಯಲ್ಲಿ ಸಂಚರಿಸಿ.

ಅಧಿಕ ಬಾರ ಹೇರಿಕೊಂಡು ಹೋಗುವ ಘನ ಲಾರಿಗಳ ಸಂಚಾರದಿಂದ ರಸ್ತೆ ಕುಸಿತ ಭೀತಿ ಉಂಟಾಗುತ್ತಿದೆ ಎಂಬ ಕೂಗು ಇಂದು ನಿನ್ನೆಯದಲ್ಲ. ರಸ್ತೆಯ ಬದಿ ಕುಸಿತವಾದಲ್ಲಿಗೆ ತಡೆಗೋಡೆಗಳ ನಿರ್ಮಾಣವಾಗದ ಹಿನ್ನಲೆಯಲ್ಲಿ ಅಪಾಯವನ್ನು ಆಹ್ವಾನಿಸುತ್ತಿದೆ.

ಜಾಹೀರಾತು

ಕಲ್ಲಡ್ಕ- ಕಾಂಞಂಗಾಡು ಹೆದ್ದಾರಿಯ ಗೋಳ್ತಮಜಲು, ಮಜಿಓಣಿ, ಕಾಶಿಮಠ ತಿರುವು, ಉಕ್ಕುಡ ದರ್ಬೆ, ಕೇಪು, ಮರಕ್ಕಿಣಿ, ಸಾರಡ್ಕ ಚೆಕ್ ಪೋಸ್ಟ್ ಮೊದಲು ಹಾಗೂ ಸಾರಡ್ಕ ಗಡಿ ಸಮೀಪ ರಸ್ತೆಯ ಮೇಲ್ಬಾಗ ಉತ್ತಮವಾಗಿ ಕಾಣಿಸಿದರೂ ಬದಿಯಲ್ಲಿ ಅಪಾಯ ಸದಾ ಆಹ್ವಾನಿಸುತ್ತಿದೆ. ಈ ಭಾಗದಲ್ಲಿ ಸಂಚರಿಸುವ ವಾಹನ ಸವಾರರು ವೇಗಕ್ಕೆ ಮಿತಿ ಹಾಕಿ ಎಚ್ಚರದಿಂದ ಹೋಗದಿದ್ದಲ್ಲಿ ಅಪಾಯ ನಿಶ್ವಿತ.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.