ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪುಂಜಾಲಕಟ್ಟೆ ವಲಯದ ಕಜೆಕಾರು ಮಾಡ ಪಲ್ಕೆ ಹಾಗೂ ಕರ್ಲ ತೆಂಕ ಕಜೆಕಾರು ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮ ಕಜೆಕಾರು ಮಹಾದೇವ ದೇವೇಶ್ವರ ದೇವಸ್ಥಾನದಲ್ಲಿ ನಡೆಯಿತು
ಅಧ್ಯಕ್ಷತೆಯನ್ನು ದೇವಸ್ಥಾನದ ಆಡಳಿತ ಮುಕ್ತೆಸರರಾದ ಕೆ ಯಶೋಧರ ಪೂಜಾರಿ ವಹಿಸಿದ್ದರು. ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಗುಣಶೇಖರ್ ಕೊಡಂಗೆ ಉದ್ಘಾಟಿಸಿದರು.
ಜಿಲ್ಲಾ ಯೋಜನಾಧಿಕಾರಿ ಸುನೀತಾ , ತಾಲೂಕು ಯೋಜನಾಧಿಕಾರಿ ಜಯಾನಂದ್ ಪಿ, ಪ್ರಗತಿ ಬಂದು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷ ಚಿದಾನಂದ ರೈ ಕಕ್ಯ ,ಗ್ರಾಪಂ ಮಾಜಿ ಅಧ್ಯಕ್ಷ ಡಿಕಯ್ಯ ಬಂಗೇರ, ಜನಜಾಗೃತಿ ವೇದಿಕೆ ಸದಸ್ಯ ಯಶವಂತ ಕೊದ್ಯೆಲ್, ಪ್ರಮುಖರಾದ ಸುನೀತಾ, ಜಾರಪ್ಪ ಕುಲಾಲ್, ಪ್ರವೀಣ್ ಅಬುರ ಉಪಸ್ಥಿತರಿದ್ದರು.
ವಲಯ ಮೇಲ್ವಿಚಾರಕಿ ಸವಿತಾ ಸ್ವಾಗತಿಸಿ, ಸೇವಾಪ್ರತಿನಿಧಿ ಸುಧಾ ರೈ ವಂದಿಸಿದರು.ಪ್ರಕಾಶ್ ಕರ್ಲ ಕಾರ್ಯಕ್ರಮ ನಿರೂಪಿಸಿದರು. ಸೇವಾಪ್ರತಿನಿಧಿ ಉಷಾ, ಭವ್ಯ, ಕುಸುಮ ಸಹಕರಿಸಿದರು.
(more…)