ಬಂಟ್ವಾಳ: ಬಂಟ್ವಾಳ ವಲಯ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ಬಂಟ್ವಾಳ ವಲಯದ ವತಿಯಿಂದ ವಲಯದ ಕುಟುಂಬ ಸದಸ್ಯರಿಗೋಸ್ಕರ ಕುಟುಂಬ ಸಮ್ಮಿಲನ ಹಾಗೂ ಆಟಿಕೂಟ ಕಾರ್ಯಕ್ರಮ ಬಿಸಿರೋಡ್ ಕನ್ನಡ ಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಜೇಸಿ ಬಂಟ್ವಾಳ ಪೂರ್ವಾಧ್ಯಕ್ಷ ಉದ್ಯಮಿ ಸದಾನಂದ ಬಂಗೇರ ನೆರವೇರಿಸಿದರು.
ವಲಯಧ್ಯಕ್ಷರಾದ ರಾಜೇಂದ್ರ ಕೆ, ಸಂಪನ್ಮೂಲ ವ್ಯಕ್ತಿ ನಾಗರಾಜ್ ಬಜಾಲ್, ಜಿಲ್ಲಾ ಕಟ್ಟಡ ಸಮಿತಿ ಅಧ್ಯಕ್ಷರಾದ ಆನಂದ್, ಜಿಲ್ಲಾ ಕ್ರೀಡಾಕಾರ್ಯದರ್ಶಿ ಹರೀಶ್ ಕುಂದರ್, ಗೌರವಾಧ್ಯಕ್ಷರಾದ ಕಿಶೋರ್, ಕಾರ್ಯದರ್ಶಿ ರವಿ ಕಲ್ಪನೆ, ಕೋಶಾಧಿಕಾರಿ ಕೃಷ್ಣರಾಜ್ ರಾವ್,ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಶರತ್ ಕಲ್ಲಡ್ಕ ಹಾಗೂ ಅಜಿತ್ ಬಂಟ್ವಾಳ ಉಪಸ್ಥಿತರಿದ್ದರು.
ಗೌರವಧ್ಯಕ್ಷರಾದ ಕಿಶೋರ್ ಸ್ವಾಗತಿಸಿ, ರವಿ ಕಲ್ಪನೆ ಧನ್ಯವಾದವಿತ್ತರು. ದಯಾನಂದ್ ಬಂಟ್ವಾಳ್ ಕಾರ್ಯಕ್ರಮ ನಿರೂಪಿಸಿದರು. ನಂತರ ನಾಗರಾಜ್ ಬಜಾಲ್ ರವರು ಸದಸ್ಯರೂಗಳಿಗೆ ವಿವಿಧ ಆಟೋಟ ಹಾಗು ಮನರಂಜನೆ ಗಳನ್ನು ನಡೆಸಿ ಕೊಟ್ಟರು.