ಸಾಮಾಜಿಕವಾಗಿ, ಬಿಜೆಪಿ ಮತ್ತು ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಬೋಳಂತೂರು ನಿವಾಸಿ ರಾಕೋಡಿ ಈಶ್ವರ ಭಟ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಮಾಜಿ ಸಚಿವ ಬಿ.ರಮಾನಾಥ ರೈ ಬರಮಾಡಿಕೊಂಡರು. ಸುಮಾರು 50ಕ್ಕೂ ಅಧಿಕ ವರ್ಷಗಳ ಕಾಲ ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು, ತನ್ನೂರಿನ ಸಮಸ್ಯೆಗಳ ಕುರಿತು ನೀಡಿದ ಮನವಿಗಳಿಗೆ ಯಾವುದೇ ಬೆಲೆ, ಸ್ಪಂದನೆ ದೊರಕದೇ ಇರುವ ಕಾರಣ, ಪಕ್ಷ ತೊರೆದು, ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಹೊಂದಿದ್ದಾಗಿ ತಿಳಿಸಿದರು.ಎಂದು ಪ್ರಕಟಣೆ ತಿಳಿಸಿದೆ