ಬೈಕ್ ಅಪಘಾತದಲ್ಲಿ ಇಹಲೋಕ ತ್ಯಜಿಸಿದ ವಿಡಿಯೋಗ್ರಾಫರ್ ಕುಟುಂಬಕ್ಕೆ ಹಿಂದೂ ಟೂರಿಸ್ಟ್ ಡ್ರೈವರ್ಸ್ ವತಿಯಿಂದ ಅರ್ಥಿಕ ಸಹಾಯ ಧನ ನೀಡಲಾಯಿತು. ಇತ್ತೀಚೆಗೆ ಪಾಣೆಮಂಗಳೂರಿನಲ್ಲಿ ನಡೆದ ಅಪಘಾತದಲ್ಲಿ ರಕ್ಷಿತ್ ರೈ ಎಂಬವರು ಮೃತಪಟ್ಟಿದ್ದರು. ಅವರ ಕುಟುಂಬಕ್ಕೆ ಹಿಂದೂ ಟೂರಿಸ್ಟ್ ಡ್ರೈವರ್ಸ್ ವತಿಯಿಂದ ರೂ. 1,39,218 ಹಸ್ತಾಂತರಿಸಲಾಯಿತು.
ರೂ.1 ಲಕ್ಷ ಹಣ ರಕ್ಷಿತ್ ರೈ ಮಗಳ ಹೆಸರಲ್ಲಿ ಫಿಕ್ಸೆಡ್ ಡೆಪಾಸಿಟ್ ಇಡಲಾಗಿದ್ದು, ಉಳಿದ ಮೊತ್ತ 39,218 ರೂಪಾಯಿಯನ್ನು ರಕ್ಷಿತ್ ರೈ ಅವರ ತಾಯಿಗೆ ಹಸ್ತಾಂತರ ಮಾಡಲಾಯಿತು. ರಕ್ಷಿತ್ ಅವರು ವೃತ್ತಿಯಲ್ಲಿ ವಿಡಿಯೋಗ್ರಾಫರ್ ಆಗಿದ್ದು, ಜೊತೆಗೆ ಕಳೆದ ಹಲವಾರು ವರ್ಷಗಳಿಂದ ಹಿಂದೂ ಟೂರಿಸ್ಟ್ ಡೈವರ್ಸ್ ನ ಸದಸ್ಯರಾಗಿದ್ದರು. ಗ್ರೂಪ್ ನ ಅಡ್ಮಿನ್ ಹಾಗೂ ಸಂಘದ ಸದಸ್ಯರು ಈ ಸಂದರ್ಭ ಉಪಸ್ಥಿತರಿದ್ದರು.