ಬಂಟ್ವಾಳ

ಜ.3ರಂದು ಬಿ.ಸಿ.ರೋಡ್ ನಲ್ಲಿ ವಿಜಯ ಕರ್ನಾಟಕ ಕರುನಾಡ ಸ್ವಾದ-  ಖಾದ್ಯ ಸ್ಪರ್ಧೆ – ವಿವರಗಳು ಇಲ್ಲಿವೆ

ಮನೆಯಲ್ಲೇ ಮಾಡಿದ ಅಡುಗೆಯನ್ನು ಪ್ರಸ್ತುತಪಡಿಸಿ, ಬಹುಮಾನ ಗೆಲ್ಲುವ ಅವಕಾಶವನ್ನು ವಿಜಯ ಕರ್ನಾಟಕ ನೀಡುತ್ತಿದೆ. ವಿಕ ಸಾರಥ್ಯದಲ್ಲಿ ರಾಜ್ಯದೆಲ್ಲೆಡೆ ನಡೆಯುತ್ತಿರುವ ವಿಕ ಕರುನಾಡ ಸ್ವಾದ ಸ್ಪರ್ಧಾ ಕಾರ್ಯಕ್ರಮ ಜನವರಿ 3ರಂದು ಬೆಳಗ್ಗೆ 10.30ರಿಂದ ಬಿ.ಸಿ.ರೋಡಿನ ಪೊಸಳ್ಳಿಯಲ್ಲಿರುವ ಕುಲಾಲ ಸಮುದಾಯ ಭವನದಲ್ಲಿ ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘ ಸಹಕಾರದಲ್ಲಿ ನಡೆಯಲಿದೆ.ಅತ್ಯುತ್ತಮ ಸಸ್ಯಾಹಾರಿ ಖಾದ್ಯ ತಯಾರಿಸಿ ಪ್ರಶಸ್ತಿಗೆ ಆಯ್ಕೆಯಾಗಲು ಮಹಿಳೆಯರಿಗೆ ಸುವರ್ಣಾವಕಾಶವಾಗಿದೆ.

ವಿಧಾನ ಹೀಗಿರಲಿದೆ:

ಅಡುಗೆ ಕಲೆಗಾರಿಕೆಯನ್ನು ಮೆಚ್ಚುವ ಮಹಿಳೆಯರು ಒಂದು ಮುಖ್ಯ ಸಸ್ಯಾಹಾರಿ ಖಾದ್ಯ ಮತ್ತು ಇನ್ನೊಂದು  ಎಣ್ಣೆಯಲ್ಲಿ ಕರಿದ ತಿಂಡಿಯನ್ನು  ಮನೆಯಲ್ಲೇ ತಯಾರಿಸಿ ತರಬೇಕು. 10.30ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು ಮಹಿಳೆಯರು ತಾವು ತಂದ ಖಾದ್ಯಗಳನ್ನು    ಪ್ರಸ್ತುತಪಡಿಸಲು ಅವಕಾಶ ನೀಡಲಾಗುತ್ತದೆ. ಸ್ಪರ್ಧಿಗಳು ತಾವೇ ಮಾಡಿ ತರುವ ತಲಾ ಎರಡು ಖಾದ್ಯಗಳನ್ನು ನುರಿತ ತೀರ್ಪುಗಾರರು ಪರಿಶೀಲಿಸಿ ಬಹುಮಾನ ಘೋಷಿಸುತ್ತಾರೆ. ಭಾಗವಹಿಸುವ ಎಲ್ಲರಿಗೂ ಪ್ರಮಾಣಪತ್ರ, ಉಡುಗೊರೆ ಸಿಗಲಿದೆ  ವಿಜೇತರ ಆಯ್ಕೆಯನ್ನು ಅಂದೇ ಮಾಡಲಾಗುತ್ತದೆ.

Buy Products Online On Bantwala News
[products ids=”58579,58746,58444,58744,58738,58730,58720,58722″ limit=”8″ columns=”8″]

ಜಾಹೀರಾತು

ಸ್ಪರ್ಧೆಗೆ ಕೇವಲ ಸಸ್ಯಾಹಾರ ಖಾದ್ಯಗಳನ್ನು ಮಾತ್ರ ತರಲು ಅವಕಾಶವಿದೆ. ಭಾಗವಹಿಸಲು ಇಚ್ಛಿಸುವ ಮಹಿಳೆಯರು ತಮ್ಮ ಹೆಸರು, ವಿಳಾಸ ಮತ್ತು ದೂರವಾಣಿ ಸಂಖ್ಯೆಯೊಂದಿಗೆ 8861768672 ಸಂಖ್ಯೆಗೆ ವಾಟ್ಸಾಪ್ ಮಾಡಲು ಕೋರಲಾಗಿದೆ. ಫ್ರೀಡಂ ಹೆಲ್ದಿ ಕುಕಿಂಗ್ ಆಯಿಲ್ ಬಳಸಿಕೊಂಡು  ಅಡುಗೆ ಮಾಡಿ, ಬಳಸಿದ ಖಾಲಿ ಪ್ಯಾಕೆಟ್  ಸ್ಥಳಕ್ಕೆ ತಂದಲ್ಲಿ ಹೆಚ್ಚುವರಿ ಪಾಯಿಂಟ್ಸ್ ಸಿಗಲಿದೆ. ವಿಕ ಕರುನಾಡ ಸ್ವಾದ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವ ಮಹಿಳೆಯರು ತಕ್ಷಣ ನೋಂದಾಯಿಸಿಕೊಳ್ಳಬೇಕೆಂದು ವಿಜಯ ಕರ್ನಾಟಕ ಪ್ರಕಟಣೆ ತಿಳಿಸಿದೆ.
[products ids=”57650,57645,57555,57508,57480,57483″ limit=”6″ columns=”6″]

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.