ಬಂಟ್ವಾಳ

ಬಂಟ್ವಾಳ ಬ್ರಹ್ಮರಥೋತ್ಸವ 200ನೇ ಸಂಭ್ರಮ: ಹಲವು ಕಾರ್ಯಕ್ರಮ

ಜಾಹೀರಾತು

ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮೀ ದೇವಸ್ಥಾನದಲ್ಲಿ ಕಾಲಾವಧಿ ಬ್ರಹ್ಮರಥೋತ್ಸವದ ಸಂಬಂಧ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಈ ಬಾರಿ ಬ್ರಹ್ಮರಥದ 200ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ವಿಶೇಷವಾಗಿ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಆಗಮಿಸಿದ್ದು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರು.

ಮಂಗಳವಾರ ಗರುಡೋತ್ಸವ ಕಾರ್ಯಕ್ರಮಗಳು ನಡೆದವು. ಮೊಕ್ತೇಸರರ ಹತ್ತು ಸಮಸ್ತರ ಪ್ರಾರ್ಥನೆ ಬಳಿಕ ಸೇವಾ ಯಜಮಾನರ ಪ್ರಾರ್ಥನೆ ತರುವಾಯ ಮಹಾಪೂಜಾರಂಭ, ಅಭಿಷೇಕಾದಿಗಳು ನಡೆದವು. ಬಳಿಕ ಯಜ್ಞಾರಂಭ, ಯಜ್ಞಾರತಿ, ಧ್ವಜಾರೋಹಣ, ಬಲಿ, ಬೆಳ್ಳಿಪಾಲ್ಕಿ ಹಗಲೋತ್ಸವ, ಸಮಾರಾಧನೆ, ದೀಪನಮಸ್ಕಾರ, ರಾತ್ರೆ ಬಲಿ, ಗೋಪುರೋತ್ಸವ, ಗರುಡೋತ್ಸವ, ವಸಂತ ಪೂಜೆ ಇತ್ಯಾದಿ ನಡೆದವು. ಬುಧವಾರ ಹನುಮಂತೋತ್ಸವ ಕಾರ್ಯಕ್ರಮಗಳು ನಡೆದವು. ಸೇವೆಯ ಯಜಮಾನರ ಪ್ರಾರ್ಥನೆ, ಮಹಾಪೂಜಾರಂಭ, ಅಭಿಷೇಕಾದಿಗಳು, ಯಜ್ಞಾರಂಭ, ಯಜ್ಞಾರತಿ, ಬಲಿ, ಬೆಳ್ಳಿಪಾಲ್ಕಿ ಹಗಲೋತ್ಸವ, ಸಮಾರಾಧನೆ, ದೀಪ ನಮಸ್ಕಾರ, ರಾತ್ರೆ ಬಲಿ, ಗೋಪುರೋತ್ಸವ, ಹನುಮಂತೋತ್ಸವ ನಡೆದವು. ಬಳಿಕ ವಸಂತ ಪೂಜೆ ಕಾರ್ಯಕ್ರಮಗಳು ಸಂಪನ್ನಗೊಂಡವು

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ