ಯಕ್ಷಗಾನ

ನರಿಕೊಂಬು: ಮಹಮ್ಮಾಯಿ ಯಕ್ಷಕಲಾಕೇಂದ್ರ ದಶಮಾನೋತ್ಸವ ಕಾರ್ಯಕ್ರಮ ಆರಂಭ

ಬಂಟ್ವಾಳ: ದಶಮ ಸಂಭ್ರಮದಲ್ಲಿರುವ  ಇಲ್ಲಿನ ನರಿಕೊಂಬು ಶ್ರೀ ಮಹಾಮ್ಮಾಯಿ ಯಕ್ಷಗಾನ ಕಲಾಕೇಂದ್ರದ ಕಲಾರಾಧನೆ ಡಿ.2ರಂದು ಆರಂಭಗೊಂಡಿದ್ದು, 4ರವರೆಗೆ ನಡೆಯಲಿದೆ ಎಂದು ಕೇಂದ್ರದ ಅಧ್ಯಕ್ಷ ಕೃಷ್ಣರಾಜ ಭಟ್ ಕರ್ಬೆಟ್ಟು ಮತ್ತು ಪ್ರಧಾನ ಕಾರ್ಯದರ್ಶಿ ಡಾ. ಸುಬ್ರಹ್ಮಣ್ಯ ಟಿ. ತಿಳಿಸಿದ್ದಾರೆ. ಅಬ್ಬಯಮಜಲು ಶ್ರೀ ಮಹಮ್ಮಾಯಿ ಸನ್ನಿಧಿಯಲ್ಲಿ ಶುಕ್ರವಾರ ಸಂಜೆ ಕಾರ್ಯಕ್ರಮ ಆರಂಭಗೊಂಡಿದ್ದು, ತಾಳಮದ್ದಳೆ ನಡೆಯಿತು.

ಜಾಹೀರಾತು

ನರಿಕೊಂಬು ಶ್ರೀ ಲಕ್ಷ್ಮೀನರಸಿಂಹ ದೇವಳದ ಅನ್ನಪೂರ್ಣ ಸಭಾಭವನದಲ್ಲಿ ಶನಿವಾರ ಮಧ್ಯಾಹ್ನ ಯಕ್ಷಾರಾಧನೆಯನ್ನು ಬಂಟ್ವಾಳ ತಹಸೀಲ್ದಾರ್ ಡಾ. ಸ್ಮಿತಾ ರಾಮು ಉಪಸ್ಥಿತಿಯಲ್ಲಿ ಮೊಗರ್ನಾಡು ದೇಗುಲದ ಮೊಕ್ತೇಸರ ವೇ.ಮೂ.ಜನಾರ್ದನ ವಾಸುದೇವ ಭಟ್ ಉದ್ಘಾಟಿಸಲಿದ್ದಾರೆ.

ಜಾಹೀರಾತು

ಬಳಿಕ ಕೇಂದ್ರದ ಮಹಿಳಾ ತಂಡದವರಿಂದ ತಾಳಮದ್ದಲೆ ಮತ್ತು  ಕೀರ್ತನ ಸಂಗೀತ ಶಾಲೆಯ ಹಿರಿಯ ಕಲಾವಿದರಿಂದ ಸಂಗೀತಾರಾಧನೆ, ಸ್ಥಳೀಯ ಪ್ರತಿಭೆಗಳಿಂದ ಭರತನಾಟ್ಯ ಕಾರ್ಯಕ್ರಮವು ನಡೆಯಲಿದೆ

ಭಾನುವಾರ ಇದೇ ಸಭಾಭವನದಲ್ಲಿ ನಡೆಯಲಿರುವ ಯಕ್ಷಾರಾಧನೆಯ ಸಭಾ ಕಾರ್ಯಕ್ರಮ ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘ, ಪುತ್ತೂರು ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಬಂಟ್ವಾಳದ ಶಾಸಕ ಉಳಿಪ್ಪಾಡಿಗುತ್ತು  ರಾಜೇಶ್ ನಾಯ್ಕ್ ಭಾಗವಹಿಸುವರು. ಬಳಿಕ ಕೇಂದ್ರದ ಯುವ ಪ್ರತಿಭೆಗಳಿಂದ ಶ್ರೀವತ್ಸ ಎಸ್. ಆರ್. ನಿರ್ದೇಶನದಲ್ಲಿ ರತಿ ಕಲ್ಯಾಣ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ.

ಜಾಹೀರಾತು

 

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ